ಬಿಬಿಎಂಪಿ ಕಸದ ಲಾರಿ ಢಿಕ್ಕಿ ಪ್ರಕರಣ: ಚಾಲಕನ ಬಂಧನ
ಬಂಧಿತ ಚಾಲಕ ಆಂಜಪ್ಪ
ಬೆಂಗಳೂರು, ಎ.2: ಬಿಬಿಎಂಪಿ ಕಸದ ಲಾರಿ ಹರಿದು ವೃದ್ದ ಸಾವನ್ನಪ್ಪಿದ ಪ್ರಕರಣ ಸಂಬಂಧ ಲಾರಿ ಚಾಲಕನನ್ನ ಬಂಧಿಸುವಲ್ಲಿ ಚಿಕ್ಕಜಾಲ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಜಪ್ಪ ಎಂಬಾತ ಬಂಧಿತ ಚಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 31ರಂದು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ವೃದ್ದನ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಸ್ಥಳದಲ್ಲೇ 70 ವರ್ಷದ ರಾಮಯ್ಯ ಸಾವನ್ನಪ್ಪಿದ್ದ. ಅಪಘಾತ ಬಳಿಮ ಚಾಲಕ ಆಂಜಪ್ಪ ಡಂಪಿಂಗ್ ಯಾರ್ಡ್ ನಲ್ಲಿ ಲಾರಿ ನಿಲ್ಲಿಸಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
Next Story