ಬೆಂಗಳೂರು | ಬಿಜೆಪಿ ಮುಖಂಡ ಅನಂತರಾಜು ಆತ್ಮ ಹತ್ಯೆ ಪ್ರಕರಣ: ಪತ್ನಿಯ ವಿಚಾರಣೆ
ಅನಂತರಾಜು
ಬೆಂಗಳೂರು, ಮೇ 24: ಹೇರೋಹಳ್ಳಿ ವಾರ್ಡ್ ಬಿಜೆಪಿ ನಾಯಕ ಅನಂತರಾಜು ಸಾವು ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಠಾಣಾ ಪೊಲೀಸರ ಮುಂದೆ ಅನಂತರಾಜು ಪತ್ನಿ ಸುಮಾ ವಿಚಾರಣೆಗೆ ಹಾಜರಾದರು.
ಬುಧವಾರ ವಿಚಾರಣೆಗೆ ಹಾಜರಾದ ಅವರಿಂದ ಆಡಿಯೊ ವೈರಲ್ ಕುರಿತು ಹೇಳಿಕೆ ದಾಖಲಿಸಿಕೊಂಡರು ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಅನಂತರಾಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬಳಿಕ ಪತ್ನಿ ಸುಮಾ, ತನ್ನ ಪತ್ನಿ ಹನಿಟ್ರ್ಯಾಪ್ ಒತ್ತಡಕ್ಕೆ ಮಣಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಖಾ ಎಂಬುವವರು ಸಾವಿಗೆ ಕಾರಣ ಅವರನ್ನು ಬಂಧಿಸಬೇಕೆಂದು ದೂರು ನೀಡಿದ್ದರು.
ಇದಾದ ಬಳಿಕ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ರೇಖಾಳನ್ನು ಬಂಧಿಸುತ್ತಿದ್ದಂತೆ ರೇಖಾ ಹಾಗೂ ಸುಮಾ ಅವರ ನಡುವೆ ನಡೆದ ಫೋನ್ ಸಂಭಾಷಣೆ ವೈರಲ್ ಆಗಿತ್ತು. ಪ್ರಕರಣಕ್ಕೆ ತಿರುವು ಸಿಗುತ್ತಿದ್ದಂತೆ ಸುಮಾ ಮೇಲೆ ಪೊಲೀಸರು ಅನುಮಾನ ವ್ಯಕ್ತವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸುಮಾಗೆ ನೋಟಿಸ್ ಜಾರಿ ಮಾಡಿದ್ದರು.
ಈ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story