ಬೆಂಗಳೂರು | ಹೆಣ್ಣು ಮಗುವೆಂದು ಕೊಲೆಗೆ ಯತ್ನ ಆರೋಪ: ತಂದೆ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.27: ಹೆಣ್ಣು ಮಗುವೆಂಬ ಕಾರಣಕ್ಕಾಗಿಯೇ ತಂದೆಯೊಬ್ಬ ಐದು ವರ್ಷದ ಪುತ್ರಿಯನ್ನು ಕೊಲೆಗೆ ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಆತನನ್ನು ಎಚ್ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಪ್ರಕಾಶಂ ಜಿಲ್ಲೆಯ ವೆಂಕಟೇಶ್ವರ್ ರಾವ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ವೆಂಕಟೇಶ್ವರ್ರಾವ್ 2016ರಲ್ಲಿ ನಯನಾ ಎಂಬಾಕೆಯನ್ನು ವಿವಾಹವಾಗಿದ್ದು, ಇಲ್ಲಿನ ಎಚ್ಎಎಲ್ನ ರೆಡ್ಡಿಪಾಳ್ಯದಲ್ಲಿ ವಾಸವಾಗಿದ್ದರು. ದಂಪತಿಗೆ ಐದು ವರ್ಷದ ಹೆಣ್ಣು ಮಗುವಿದ್ದು, ಕಳೆದ 10 ದಿನಗಳ ಹಿಂದೆ ಎರಡನೇ ಹೆಣ್ಣು ಮಗು ಜನನವಾಗಿದೆ ಎಂದು ತಿಳಿದುಬಂದಿದೆ.
ಇದೇ ಕಾರಣಕ್ಕೆ ಮೊದಲ ಮಗಳನ್ನು ನೋಡಿ, ಆಕೆಯ ಕತ್ತು ಹಿಸುಕಿ ಸಾಯಿಸಲು ವೆಂಟೇಶ್ವರ್ ರಾವ್ ಮುಂದಾಗಿದ್ದರು. ಇದನ್ನು ಗಮನಿಸಿದ್ದ ಪತ್ನಿ ನಯನಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
Next Story