ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಿನಲ್ಲಿ ಕರೆ ಮಾಡಿ ಹಣದ ಬೇಡಿಕೆ: ವಂಚಕರ ವಿರುದ್ಧ ದೂರು ದಾಖಲು
ಬೆಂಗಳೂರು, ಜು.7: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ಬಿಲ್ಡರ್ ಗಳಿಗೆ, ಕೆಲವು ಕಂಪೆನಿಗಳ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ ಹಣ ವರ್ಗಾಯಿಸುವಂತೆ ಒತ್ತಾಯಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆಯುಕ್ತರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚಕ 7076522681 ನಂಬರ್ ನಿಂದ ತಾನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಂದು ಹಲವು ಜನರಿಗೆ ಕರೆ ಮಾಡಿ ಹಣ ಹಣ ವರ್ಗಾಯಿಸುವಂತೆ ಒತ್ತಾಯ ಮಾಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ತುಷಾರ್ ಗಿರಿನಾಥ್, ಈ ಮೊಬೈಲ್ ನಂಬರ್(7076522681) ತನ್ನದ್ದಲ್ಲ ಹಾಗೂ ಹೀಗೆ ಕರೆ ಮಾಡಿ ಬಾಕಿ ಹಣ ಕಟ್ಟಿ ಎಂದು ತಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ವಂಚಕರ ಬಗ್ಗೆ ಸೈಬರ್ ಕ್ರೈಂಗೆ ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.
Please note that 70765 22681 is not my number.
— Tushar Giri Nath IAS (@BBMPCOMM) July 7, 2022
It has come to my notice that some fraudster has been misusing this as the number of the BBMP Chief Commissioner and misleading the public and officials. 1/2@CybercrimeCID @BlrCityPolice @CPBlr @BBMPAdmn