ಬೆಂಗಳೂರು: ಯುವಕನ ಕೊಲೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.17: ಯುವಕನೊಬ್ಬನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಬಳಿ ನಡೆದಿದೆ.
ಹೆಮ್ಮಿಗೆಪುರದ ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ (26) ಕೊಲೆಯಾದ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ನೈಸ್ ರಸ್ತೆಯ ಕೆಳಸೇತುವೆಯ ಕೋಣನಸಂದ್ರ ಬಳಿ ಇಂದು ಬೆಳಗ್ಗೆ ವಾಯುವಿಹಾರಕ್ಕೆ ಹೋದವರು ಶವವನ್ನು ಕಂಡು ಮಾಹಿತಿಯನ್ನು ನೀಡಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಮೃತದೇಹದ ಪತ್ತೆಗೆ ಸುತ್ತಮುತ್ತಲಿನವರಿಗೆ ಮಾಹಿತಿಯನ್ನು ನೀಡಿದ್ದು ಯುವಕನ ಕೈ ಮೇಲೆ ತ್ರಿಶೂಲ ಟ್ಯಾಟೂ ನೋಡಿ ಪೋಷಕರು ಮೃತದೇಹ ಗುರುತಿಸಿದ್ದಾರೆ. ಕೊಲೆಯಾದ ಹೇಮಂತ್ ಕುಮಾರ್ ಹುಟ್ಟುಹಬ್ಬವು ನಿನ್ನೆಯಾಗಿದ್ದು, ಅಚರಣೆ ಸಲುವಾಗಿ ಮನೆಯಿಂದ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ.
ಪರಿಚಿತರೇ ಬರ್ಬರವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕೆಂಗೇರಿ ಪೊಲೀಸರು ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ಕೈಗೊಂಡಿದ್ದಾರೆ.
Next Story