‘ಚುನೌತಿ ಸ್ವಾಭಿಮಾನ್ ಕೀ’ ಹಿಂದಿ ಅನುವಾದಿತ ಪುಸ್ತಕ ಬಿಡುಗಡೆ
ಬೆಂಗಳೂರು, ಆ.11: ಲೇಖಕ ಜಯರಾಮ್ ರಾಯಪುರ ಅವರ ‘ಸಿರಿಗೆ ಸೆರೆ’ ಪುಸ್ತಕವನ್ನು ಡಾ.ಷಾಕಿರಾ ಖಾನಮ್ ಹಿಂದಿ ಭಾಷೆಗೆ ಅನುವಾದ ಮಾಡಿರುವ ‘ಚುನೌತಿ ಸ್ವಾಭಿಮಾನ್ ಕೀ’ ಪುಸ್ತಕವನ್ನು ಬಿಡುಗಡೆಗೊಳಿಸಲಾಗಿದೆ.
ಗುರುವಾರ ನಗರದ ಅಲ್ ಅಮೀನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಬಿಬಿಎಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಷಾಕಿರಾ ಖಾನಮ್, ಮುಖ್ಯ ಅತಿಥಿಯಾಗಿ ಶಾಸಕ ಉದಯ್ ಗರುಡಾಚಾರ್, ವಿಶೇಷ ಅತಿಥಿಯಾಗಿ ಮಾಜಿ ಕೇಂದ್ರ ಸಚಿವ ಡಾ.ಕೆ.ರಹ್ಮಾನ್ ಖಾನ್, ಅಲ್ ಅಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಉಮರ್ ಇಸ್ಮಾಯಿಲ್ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
Next Story