ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗೃಹ ಇಲಾಖೆಯ ಸಚಿವಾಲಯದ ಹೋಮ್ ಗಾರ್ಡ್
ಬೆಂಗಳೂರು, ನ.22: ಕರ್ನಾಟಕ ಗೃಹ ಇಲಾಖೆಯ ಸಚಿವಾಲಯದಲ್ಲಿ ನಿಯೋಜನೆ ಮರಗೆ ಗೃಹ ರಕ್ಷಕನಾಗಿ(ಹೋಮ್ ಗಾರ್ಡ್) ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್, ಲಂಚವನ್ನು ಪಡೆಯುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಅವರನ್ನು ದಸ್ತಗಿರಿ ಮಾಡಿ ತನಿಖೆ ಮುಂದುವರೆಸುತ್ತಿದ್ದಾರೆ.
ಸುರೇಶ್ ಅವರು ನಿವೃತ್ತ ಪೊಲೀಸ್ ನಿರೀಕ್ಷಕರಾದ ಪಿ.ಎನ್. ಗಣೇಶ್ ಅವರ ವೈದ್ಯಕೀಯ ವೆಚ್ಚದ ಬಿಲ್ಲನ್ನು ಸಂಬಂಧಪಟ್ಟವರ ಜೊತೆ ಮಾತನಾಡಿ ಮರುಪಾವತಿಸಲು ಕ್ರಮಕೈಗೊಳ್ಳಲು 20 ಸಾವಿರ ರೂ.ಲಂಚದ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರೆನ್ನಲಾಗಿದ್ದು, ಅದರಂತೆ ಸತೀಶ್ ಅವರು 20,000 ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
Next Story