ಕನ್ನಡದ ಹಿರಿಯ ನಟ, ‘KGF’ ಖ್ಯಾತಿಯ ತಾತ ಕೃಷ್ಣ ಜಿ. ರಾವ್ ನಿಧನ
ಬೆಂಗಳೂರು, ಡಿ. 7: ‘ಕೆಜಿಎಫ್’ (KGF) ಸಿನೆಮಾದ ತಾತ ಎಂದೇ ಖ್ಯಾತಿ ಗಳಿಸಿದ್ದ ಕೃಷ್ಣ ಜಿ. ರಾವ್ ಅವರು ಇಂದು ( ಡಿ. 7) ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯ ಉಂಟಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಕೊನೆ ಯುಸಿರೆಳೆದಿದ್ದಾರೆ.
ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯದ ಬಗ್ಗೆ ಸೋದರ ಸಂಬಂಧಿ ನಂದಕುಮಾರ್ ಅವರು ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.
Next Story