ದೊಡ್ಡಬಳ್ಳಾಪುರ | ನಗರಸಭೆ ಬಿಜೆಪಿ ದಲಿತ ಸದಸ್ಯನ ಮೇಲೆ ಸ್ವಪಕ್ಷದ ಮುಖಂಡರಿಂದಲೇ ಹಲ್ಲೆ ಆರೋಪ; FIR ದಾಖಲು
ದೊಡ್ಡಬಳ್ಳಾಪುರ: ನಗರಸಭೆಯ ಬಿಜೆಪಿ ದಲಿತ ಸದಸ್ಯನ ಮೇಲೆ ಬಿಜೆಪಿಯ ಮೇಲ್ಜಾತಿಯ ಮುಖಂಡರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಘಟನೆ ಕುರಿತು ಹಲ್ಲೆಗೊಳಗಾದ ನಗರ ಸಭೆ ಸದಸ್ಯ ಆರ್ ಶಿವಣ್ಣ, ಬಿಜೆಪಿ ಮುಖಂಡರ ವಿರುದ್ಧ ನೀಡಿರುವ ದೂರಿನನ್ವಯ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಜನ ಸೇರದಿದ್ದಕ್ಕೆ ಬಿಜೆಪಿಯ ಮುಖಂಡರು ಪಕ್ಷದ ಕಚೇರಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ದಲಿತ ಸಮುದಾಯದ ನಗರಸಭಾ ಸದಸ್ಯ ಆರ್ ಶಿವಣ್ಣ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾಗ ಗಲಾಟೆ ಉಂಟಾಗಿದೆ ಎನ್ನಲಾಗಿದೆ. ಈ ವೇಳೆ ಬಿಜೆಪಿಯ ಮುಖಂಡರು ಜಾತಿ ನಿಂದನೆ ಮಾಡಿದ್ದಲ್ಲದೇ ಅವರ ಅಂಗಿ ಹರಿದು ಹಾಕಿ, ಒದ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
Next Story