-

ರಾಜಕೀಯ ಬದಲಾವಣೆಯಲ್ಲಿ ಚಳವಳಿ ಪ್ರಮುಖ ಪಾತ್ರವಹಿಸಿದೆ: ದಿನೇಶ್ ಅಮೀನ್ ಮಟ್ಟು

-

ಬೆಂಗಳೂರು, ಫೆ. 5: ನಮ್ಮ ದೇಶದ ರಾಜಕೀಯ ಪರಿಸ್ಥಿತಿ ಬದಲಾವಣೆ ಮಾಡುವಲ್ಲಿ ಚಳವಳಿಗಳ ಪಾತ್ರ ಬಹುಮುಖ್ಯವಾದದ್ದು ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ರವಿವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ನಮ್ಮ ಧ್ವನಿ ಬಳಗವೂ ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ನೆನಪಿನಲ್ಲಿ ಆಯೋಜಿಸಿದ್ದ ಪ್ರಬುದ್ಧ ಭಾರತ ಕಾರ್ಯಕ್ರಮದಲ್ಲಿ ‘ಚಳವಳಿ ಗುರಿ ಹಾಗೂ ದಾರಿ’ ವಿಷಯ ಕುರಿತ  ಅವರು ಮಾತನಾಡಿದರು.

ನಮ್ಮ ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಪ್ರಧಾನ ಸ್ಥಾನವನ್ನು ಹೊಂದಿವೆ. ಒಂದು ವೇಳೆ, ಈ ಮೂರು ವಿಭಾಗಗಳು ವಿಫಲವಾಗಿ, ವ್ಯವಸ್ಥೆ ಆಸ್ತಿರವಾದರೆ, ಚಳವಳಿ ಒಂದೇ ಪರಿಹಾರ ಆಗಿದೆ.ಹೀಗಾಗಿ, ನಮ್ಮಲ್ಲಿರುವ ಸಣ್ಣ ಮಟ್ಟದ ಗೊಂದಲಗಳನ್ನು ದೂರ ಇರಿಸಿ ಚಳವಳಿಗಳಲ್ಲಿ ಸಕ್ರಿಯವಾಗಬೇಕಾಗಿದೆ ಎಂದು ಕರೆ ನೀಡಿದರು.

1975ರಿಂದ ಹತ್ತು ವರ್ಷಗಳ ಕಾಲ ಕರ್ನಾಟದಲ್ಲಿ ಭಾಷಾವಾರು ಸೇರಿದಂತೆ ಅನೇಕ ಚಳವಳಿಗಳು ನಡೆದವು.ಈ ಅವಧಿಯನ್ನು ಚಳವಳಿ ದಶಕ ಎಂದೇ ನೆನಪು ಮಾಡಿಕೊಳ್ಳಬಹುದು. ಇಂತಹ ಬೆಳವಣಿಗೆಯಿಂದ ಆಗಿನ, ಯುವಕರು ಹಲವು ವಿಚಾರಗಳನ್ನು ತಿಳಿದುಕೊಂಡು, ಸಮಾಜ ಸಮಸ್ಯೆಗಳಿಗೆ ಧ್ವನಿಯಾದರು. ಆನಂತರ, ಅಂದರೆ, ಇಪ್ಪತ್ತು ವರ್ಷಗಳ ಹಿಂದೆ ಜನಿಸಿದ ಯುವಕರು ಇದೀಗ ಬಹುತೇಕರು ಭಕ್ತರ ಸಾಲಿಗೆ ಬರುತ್ತಾರೆ ಎಂದು ವಿಶ್ಲೇಷಿಸಿದರು.

ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, ಬ್ರಾಹ್ಮಣ್ಯವು ಮೂಲದಲ್ಲಿ ಧಾರ್ಮಿಕ ಶೋಷಣೆಯಾಗಿತ್ತು. ಆದರೆ ಈಗ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳನ್ನೂ ಆವರಿಸಿದೆ. ಎಲ್ಲೆಡೆಯೂ ತನ್ನ ಪ್ರಭಾವ ಬೀರುವ ಮೂಲಕ ಪ್ರಗತಿಗೂ ಅಡ್ಡಿಯಾಗಿದೆ.ಇಂತಹ ಸಂದರ್ಭದಲ್ಲಿ ದಲಿತ ಚಳವಳಿಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ನಮ್ಮ ಹುಡುಗರು ಎಲ್ಲರ ಎದುರೇ ಶೌರ್ಯದಿಂದ ನುಗ್ಗಿ ಫಾಝಿಲ್ ಕೊಲೆ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‍ನ ಶರಣ್ ಪಂಪ್‍ವೆಲ್ ಹೇಳಿದ್ದಾನೆ. ಆದರೆ, ಆತ ಏಕೆ ಕರಾವಳಿ ಭಾಗದ ಜನರ ಸಮಸ್ಯೆ ಕುರಿತು ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

ಶರಣ್ ಪಂಪ್‍ವೆಲ್ ವಿರುದ್ಧ ಬಹುತೇಕರು ಮಾತನಾಡಲು ಹಿಂದೇಟು ಹಾಕುತ್ತಾರೆ. ಆದರೆ, ಸುರತ್ಕಲ್ ಟೋಲ್‍ಗೇಟ್ ವಿಚಾರವಾಗಿ ನಡೆದ ಹೋರಾಟಗಳಲ್ಲಿ ಏಕೆ ಆತ ಸುಮ್ಮನಿದ್ದ.ಜನರಿಗೆ ತೊಂದರೆ ಆದಾಗ ಮಾತನಾಡುವುದಿಲ್ಲವೇಕೆ ಎಂದ ಅವರು, ಚಳವಳಿಗಳಿಂದಲೇ ಒಂದಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿದೆ ವಿನಃ, ವಿಧಾನಸಭಾದಲ್ಲಿ ಕುಳಿತು ಮಾತನಾಡುವದರಿಂದ ಅಲ್ಲ ಎಂದರು.

ಈ ಸಂದರ್ಭದಲ್ಲಿ ಚಿಂತಕಿ ಅಖಿಲಾ ವಿದ್ಯಾಸಂದ್ರ, ಹೋರಾಟಗಾರದ ವಾಸುದೇವ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top