ಪುನೀತ್ ರಾಜ್ಕುಮಾರ್ ರಸ್ತೆ ನಾಮಕರಣ ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಫ್ಲೆಕ್ಸ್ನಲ್ಲಿ ಅಪ್ಪು ಫೋಟೋನೇ ಇಲ್ಲ!
ರಾರಾಜಿಸಿದ ರಾಜಕೀಯ ನಾಯಕರು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಬೆಂಗಳೂರು, ಫೆ.7: ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ನಟ ಪುನೀತ್ ರಾಜ್ಕುಮಾರ್ ಹೆಸರನ್ನು ಮಂಗಳವಾರ ನಾಮಕರಣ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ನಿನ್ನೆ ಹೇಳಿದ್ದರು. ಅದರಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಇದಕ್ಕಾಗಿ ಹಾಕಿದ ಫ್ಲೆಕ್ಸ್ ಹಾಗೂ ಆಹ್ವಾನ ಪತ್ರಿಕೆಯಲ್ಲಿ ರಾಜಕೀಯ ನಾಯಕರ ಫೋಟೊ ಮಾತ್ರ ಕಾಣಿಸುತ್ತಿದೆ. ಆದರೆ, ಎಲ್ಲಿಯೂ ಡಾ. ಪುನೀತ್ ರಾಜ್ಕುಮಾರ್ ಅವರ ಫೋಟೊ ಇಲ್ಲ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ, ಕಂದಾಯ ಸಚಿವ ಆರ್.ಅಶೋಕ್ ಅವರ ಫೋಟೊ ಆಹ್ವಾನ ಪತ್ರಿಕೆ ಮತ್ತು ಫ್ಲೆಕ್ಸ್ ನಲ್ಲಿ ಕಾಣಿಸುತ್ತಿದೆ.
ಅಭಿಮಾನಿಗಳ ಆಕ್ರೋಶ:
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪುನೀತ್ ಅವರ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. 'ಪುನೀತ್ ರಾಜಕುಮಾರ್ ರಸ್ತೆ ನಾಮಕರಣ ಸಮಾರಂಭ ಅಂತೆ, ಆದರೆ ನಮ್ಮ ಅಪ್ಪು ಫೋಟೋ ಹಾಕಬೇಕು ಎಂಬ ಬುದ್ದಿ ಇಲ್ಲ, ಈ ರೀತಿ ರಾಜಕೀಯ ಕಾರ್ಯಕ್ರಮ ಮಾಡಿ ಪ್ರಚಾರ ಪಡೆಯುವ ನೀಚ ರಾಜಕೀಯ ಬಿಡಿ' ಎಂದು ಪುನೀತ್ ಅಭಿಮಾನಿಯೊಬ್ಬರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
''ಒಳ್ಳೆದಾಯ್ತು ಬಿಡಿ, ಇವರ ಜೊತೆ ಅವರ ಫೋಟೋ ಇದ್ದಿದ್ದರೆ ತುಂಬಾ ವ್ಯಂಗ್ಯವಾಗಿರೋದು'' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇಂದು ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ಪುನೀತ್' ರಸ್ತೆಯನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ರಾಜ್ಕುಮಾರ್ ಸೇರಿ ಅನೇಕರು ಭಾಗಿಯಾಗಲಿದ್ದಾರೆ.
ಪುನೀತ್ ರಾಜಕುಮಾರ್ ರಸ್ತೆ ನಾಮಕರಣ ಸಮಾರಂಭ ಅಂತೆ, ಆದರೆ ನಮ್ಮ ಅಪ್ಪು ಫೋಟೋ ಹಾಕಬೇಕು ಎಂಬ ಬುದ್ದಿ ಇಲ್ಲ, ಈ ರೀತಿ ರಾಜಕೀಯ ಕಾರ್ಯಕ್ರಮ ಮಾಡಿ ಪ್ರಚಾರ ಪಡೆಯುವ ನೀಚ ರಾಜಕೀಯ ಬಿಡಿ @Tejasvi_Surya @BSBommai @RAshokaBJP ಎಂತಹ ಉಪಾಯ #PuneethRajkumar #Bangalore #Karnataka pic.twitter.com/2TE7eSaik5
— Fight for your right (@Harish_7777) February 7, 2023
ಪುನೀತ್ ರಾಜಕುಮಾರ್ ರಸ್ತೆಗೆ ದೃಷ್ಟಿ ಆಗಬಾರದು ಎಂದು ನಾಲ್ಕು ದೃಷ್ಠಿ ಬೊಂಬೆ ಗಳ ಫೋಟೋ ಇಟ್ಟಿದ್ದಾರೆ ಯಾರು. pic.twitter.com/uRjWvBQXA0
— Che_ಕೃಷ್ಣ (@ChekrishnaCk) February 7, 2023
ಪುನೀತ್ ರಾಜಕುಮಾರ್ ರಸ್ತೆ ನಾಮಕರಣ ಕಾರ್ಯಕ್ರಮ....
— ಚೇತನ್ ಸೂರ್ಯ ಎಸ್ - Chethan Surya (@Chethan_Surya_S) February 7, 2023
ಆದರೆ ಅಪ್ಪು ಫೋಟೋ ನೇ ಇಲ್ಲ....
ರಾಜಕೀಯ ಪಕ್ಷಗಳ ಕಾರ್ಯಕ್ರಮ ಗಳು ಹೀಗೇನಾ????..pic.twitter.com/iYKu4KMOdf