ಬೆಂಗಳೂರಿನಲ್ಲಿ ಗಗನಸಖಿ ಸಾವು ಪ್ರಕರಣಕ್ಕೆ ತಿರುವು: ಪ್ರಿಯಕರ ಆದೇಶ್ ಬಂಧನ, FIR ದಾಖಲು
ಬೆಂಗಳೂರು, ಮಾ.12: ಗಗನಸಖಿಯೊಬ್ಬರು ಅಪಾರ್ಟ್ಮೆಂಟ್ನ 4ನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದೆ.
'ಇದು ಆಕಸ್ಮಿಕ ಅಥವಾ ಆತ್ಮಹತ್ಯೆ ಅಲ್ಲ, ಇದು ಕೊಲೆ' ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಮದುವೆಯಾಗುವಂತೆ ಗಗನಸಖಿ ಅರ್ಚನಾ ಒತ್ತಾಯಿಸಿದಾಗ, ಆದೇಶ್ ಇದಕ್ಕೆ ನಿರಾಕರಿಸಿದ್ದ ಎನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮದ್ಯದ ಅಮಲಿನಲ್ಲಿ ಆದೇಶ್, ಅರ್ಚನಾಳನ್ನು ಬಲವಾಗಿ ತಳ್ಳಿದ್ದ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಗಗನಸಖಿ ಅರ್ಚನಾಳ ಪ್ರಿಯಕರ ಆದೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು ಆತನನ್ನು ಬಂಧಿಸಲಾಗಿದೆ.
ಮೂಲತಃ ಹಿಮಾಚಲ ಪ್ರದೇಶದ ಅರ್ಚನಾ ಮಾರ್ಚ್ 11 ರಂದು ತಡರಾತ್ರಿ ಕೋರಮಂಗಲದ 8ನೇ ಬ್ಲಾಕ್ನಲ್ಲಿರುವ ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ ನ 4ನೆ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು.
Next Story