ಪರಮೇಶ್ವರ್ ಹೇಳಿದರೆ 10 ನಿಮಿಷಗಳಲ್ಲಿ ಶರಣಾಗತಿ: ಬಾಂಬ್ ನಾಗನ "ಹೊಸ ಬಾಂಬ್"
ಬೆಂಗಳೂರು, ಮೇ 9: ಹಳೆಯ ನೋಟುಗಳ ಸಂಗ್ರಹ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಬಾಂಬ್ ನಾಗ 2ನೆ ಸಿಡಿ ಬಿಡುಗಡೆಗೊಳಿಸಿದ್ದು, ಐಪಿಎಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ವಕೀಲ ಶ್ರೀರಾಮರೆಡ್ಡಿ ಮೂಲಕ ಸಿಡಿ ಬಿಡುಗಡೆಗೊಳಿಸಿರುವ ಬಾಂಬ್ ನಾಗ ಯಾನೆ ನಾಗರಾಜ್ ತನ್ನ ಮೇಲಿರುವುದೆಲ್ಲವೂ ಸಣ್ಣಪುಟ್ಟ ಕೇಸ್ ಗಳು. ಇದೆಲ್ಲಾ ಐಪಿಎಸ್ ಅಧಿಕಾರಿಗಳ ಸಂಚು ಎಂದು ಆರೋಪಿಸಿದ್ದಾನೆ. ಪರಮೇಶ್ವರ್ ಜಂಟಲ್ ಮ್ಯಾನ್ ಆಗಿದ್ದು, ಅವರು ಹೇಳಿದರೆ ಹತ್ತೇ ನಿಮಿಷಗಳಲ್ಲಿ ಶರಣಾಗುತ್ತೇನೆ ಎಂದಿದ್ದಾನೆ.
Next Story