ಬೈಂದೂರು: ನಮ್ಮ ನಾಡ ಒಕ್ಕೂಟದಿಂದ ವೃತ್ತಿ ಮಾರ್ಗದರ್ಶನ, ಸರಕಾರಿ ಉದ್ಯೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರ
ಬೈಂದೂರು, ಜ.31: ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ಆಶ್ರಯದಲ್ಲಿ ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೊಗಿ ಯುವಕರಿಗಾಗಿ ಪ್ರೇರಣಾ, ವೃತ್ತಿ ಮಾರ್ಗದರ್ಶನ ಹಾಗೂ ಸರಕಾರಿ ಉದ್ಯೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರವು ಬೈಂದೂರಿನ ಅಂಬಿಕಾ ಇಂಟರ್ ನ್ಯಾಶನಲ್ ಹೋಟೆಲ್ ನಲ್ಲಿ ರವಿವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸರ್ಫರಾಝ್ ಜೆ. ಹಾಶಿಂ, ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ ನ ನಿರ್ದೇಶಕ ಡಾ.ಸೈಯದ್ ಅಮೀನ್ ಅಹ್ಮದ್, ಸರಕಾರಿ ಉದ್ಯೋಗಿಗಳು ಮತ್ತು ಪ್ರೇರಕ ಭಾಷಣಕಾರರಾದ ಅಬ್ದುಲ್ ರಝಾಕ್ ಮತ್ತು ಅಹ್ಮದ್ ನೌಝಲ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಾಗಾರದ ಸಮಾರೋಪ ಸಮಾರಂಭವು ನಮ್ಮ ನಾಡ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಮುಶ್ತಾಕ್ ಅಹ್ಮದ್ ಬೆಳ್ವೆ ಅಧ್ಯಕ್ಷತೆಯಲ್ಲಿ ನಡೆಯಿತು.
ಒಕ್ಕೂಟದ ತಾಲೂಕು ಅಧ್ಯಕ್ಷ ಅಬ್ದುಲ್ ಸಮೀ ಹಳಗೇರಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆಯಿಶಾ ಸಫಾ ನಾಗೂರು, ಡಾ.ಅರ್ಷಿಯಾ ನಾಝ್ ಪರಿ ಶಿರೂರು, ಡಾ.ಸಹಾನ ಶಿರೂರು, ಚಾರ್ಟರ್ಡ್ ಅಕೌಂಟೆಂಟ್ ಮುಹಮ್ಮದ್ ಆದಿಲ್ ಶಿರೂರು, ಪಿ.ಎಚ್.ಡಿ ವಿದ್ಯಾರ್ಥಿನಿ ಸಮ್ರೀನ್ ಶೇಖ್ ನಾಗೂರುರನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು.
ಭಟ್ಕಳದ ತಂಝೀಮ್ ನ ಪ್ರಧಾನ ಕಾರ್ಯದರ್ಶಿ ಮೌಲಾನ ಅಬ್ದುಲ್ ರಕೀಬ್ ನದ್ವಿ, ಒಕ್ಕೂಟದ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾನ ಝಮೀರ್ ಅಹ್ಮದ್ ರಶಾದಿ ಮತ್ತು ನಿವೃತ್ತ ಪ್ರಾಧ್ಯಾಪಕ ಪ್ರೊ.ಹಬೀಬ್ ಶಿರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮನ್ಸೂರ್ ಇಬ್ರಾಹೀಂ, ಜಿಲ್ಲಾ ಕೋಶಾಧಿಕಾರಿ ಸೈಯದ್ ಅಜ್ಮಲ್ ಶಿರೂರು, ಜಿಲ್ಲಾ ಸದಸ್ಯ ಝೈನುಲ್ ಆಬಿದಿನ್ ಹಳಗೇರಿ, ಪರಿ ಹುಸೈನ್ ಶಿರೂರು, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ನಿವೃತ್ತ ಪ್ರಾಧ್ಯಾಪಕ ಎ.ಎಂ. ಮುಲ್ಲಾ, ತಾಲೂಕು ಸದಸ್ಯ ಕಾವಾ ಸಯೀದ್ ಹಾಗೂ ಇತರರು ಉಪಸ್ಥಿತರಿದ್ದರು.
ಈ ಕಾರ್ಯಾಗಾರದ ಸಹ ಪ್ರಾಯೋಜಕರಾಗಿ ಹಳಗೇರಿ ಓವರ್ ಸೀಸ್ ಕಮಿಟಿ ಹಳಗೇರಿ ಮತ್ತು ನಾಖುದಾ ವೆಲ್ಫೇರ್ ಅಸೋಸಿಯೇಶನ್ ಶಿರೂರು ಸಹಕರಿಸಿದರು.
ಮುಹಮ್ಮದ್ ಸಹೀಮ್ ಹಳಗೇರಿ ಕಿರಾಅತ್ ಪಠಿಸಿದರು. ತಾಲೂಕು ಉಪಾಧ್ಯಕ್ಷ ಮಮ್ದು ಇಬ್ರಾಹೀಂ ಶಿರೂರು ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ಅಲ್ತಾಫ್ ಮುಕ್ರಿ ವಂದಿಸಿದರು. ಮುಹಮ್ಮದ್ ತ್ವಾಹಾ ಶಿರೂರು ಕಾರ್ಯಕ್ರಮ ನಿರೂಪಿಸಿದರು.
200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದರು.