ಉಪ್ಪಿನಂಗಡಿ : ಸಿಮೆಂಟ್ ಸಾಗಾಟದ ಲಾರಿ ಅಗ್ನಿಗಾಹುತಿ
ಉಪ್ಪಿನಂಗಡಿ : ಮಂಗಳೂರಿನಿಂದ ಬೆಂಗಳೂರಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಅಗ್ನಿಗಾಹುತಿಯಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಲಾರಿಯ ಟಯರ್ ಸ್ಪೋಟಗೊಂಡು ಲಾರಿಗೆ ಅಗ್ನಿ ಸ್ಪರ್ಶವಾಯಿತ್ತೆಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದ್ದು, ಘಟನೆ ಸಂಭವಿಸಿದಾಕ್ಷಣ ಲಾರಿಯಲ್ಲಿದ್ದ ಚಾಲಕ ಲಾರಿಯಿಂದ ಹೊರ ಜಿಗಿದು ಅಪಾಯದಿಂದ ಪಾರಾಗಿದ್ದಾನೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುವ ವೇಳೆಗೆ ಲಾರಿ ಸಂಪೂರ್ಣ ಸುಟ್ಟು ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story