ತೊಕ್ಕೊಟ್ಟು: ಎಸ್.ವೈ.ಎಸ್.ನಿಂದ ಮದುವೆಯ ಸಹಾಯಾರ್ಥ ಚೆಕ್ ವಿತರಣೆ
ಉಳ್ಳಾಲ, ಫೆ.28: ಎಸ್.ವೈ.ಎಸ್. ತೊಕ್ಕೊಟ್ಟು ಬ್ರಾಂಚ್ ವತಿಯಿಂದ ಮದುವೆಗೆ ಸಹಾಯಾರ್ಥ ಚೆಕ್ ವಿತರಣೆ ಕಾರ್ಯಕ್ರಮವು ತೊಕ್ಕೊಟ್ಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಜರುಗಿತು.
ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಇಸ್ಮಾಯೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್.ವೈ.ಎಸ್. ತೊಕ್ಕೊಟ್ಟು ಬ್ರಾಂಚ್ ಕೋಶಾಧಿಕಾರಿ ಶಮೀರ್ ಪಿಲಾರ್ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಕಲ್ಚರಲ್ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಚೆಕ್ ವಿತರಿಸಿ ಮಾತನಾಡಿದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆದಿಲ್ ಶಾರ್ಜಾ ಮುಖ್ಯ ಭಾಷಣ ಮಾಡಿ ತೊಕ್ಕೊಟ್ಟು ಬ್ರಾಂಚ್ ನ ಕಾರ್ಯಕ್ರಮಗಳನ್ನು ಶ್ಲಾಘನೀಯ ಎಂದರು
ಈ ಸಂದರ್ಭದಲ್ಲಿ ಪತ್ರಕರ್ತ ಬಶೀರ್ ಕಲ್ಕಟ್ಟ ಹಾಗೂ ಆದಿಲ್ ಶಾರ್ಜಾ ಅವರನ್ನು ಜನಪರ ಸ್ಪಂದನವನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ವೈ.ಎಸ್. ಇಶಾಬ ಕಾರ್ಯದರ್ಶಿ ಅಮೀರ್ ತೊಕ್ಕೊಟ್ಟು, ಆಝಾದ್ ನಗರ ಬ್ರಾಂಚ್ ಅಧ್ಯಕ್ಷ ಬಶೀರ್ ಪಿಲಾರ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಎಸ್.ಎಂ.ಮುಸ್ತಫ ದಾರಂದಬಾಗಿಲು ಮತ್ತಿತರರು ಉಪಸ್ತಿತರಿದ್ದರು.
ಅಲ್ತಾಫ್ ಕುಂಪಲ ಸ್ವಾಗತಿಸಿ, ವಂದಿಸಿದರು.