ವಾಮಂಜೂರು: ದೇವಸ್ಥಾನದ ಬ್ಯಾನರ್ ತೆರವಿಗೆ ಮನವಿ
ಜಾತ್ರೆಯಲ್ಲಿ ಇತರ ಧರ್ಮದ ವ್ಯಾಪಾರಿಗಳಿಗೆ ಅನುಮತಿ ನಿಷೇಧ
ಮಂಗಳೂರು : ನಗರ ಹೊರವಲಯದ ವಾಮಂಜೂರಿನ ಅಮೃತೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಇತರ ಧರ್ಮದ ವ್ಯಾಪಾರಿಗಳ ಅಂಗಡಿ ಮಳಿಗೆಗೆ ಅನುಮತಿಯನ್ನು ನಿಷೇಧಿಸಲಾಗಿದೆ ಎಂಬ ಬ್ಯಾನರನ್ನು ದೇವಸ್ಥಾನದಲ್ಲಿ ತೂಗು ಹಾಕಲಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಸಂದೇಶ ಹಂಚಲಾಗುತ್ತದೆ. ಹೀಗೆ ಊರಿನ ಶಾಂತಿ ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಹಾಗು ಬ್ಯಾನರ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ವಾಮಂಜೂರು ಪ್ರದೇಶ ಸಮಿತಿಯಿಂದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ನಿಯೋಗದಲ್ಲಿ ಡಿವೈಎಫ್ಐ ಮುಖಂಡರಾದ ಮನೋಜ್ ವಾಮಂಜೂರು, ದಿನೇಶ್ ಬೊಂಡಂತಿಲ, ಚಂದ್ರಹಾಸ ತಾರಿಗುಡ್ಡೆ, ಹೊನ್ನಯ್ಯ ಅಂಚನ್, ಅಶೋಕ್ ಬಂಗೇರ ಉಪಸ್ಥಿತರಿದ್ದರು.
Next Story