ಡಾ.ಎಂ.ಎನ್.ರಾಜೇಂದ್ರ ಕುಮಾರ್ಗೆ ಮೋಸ್ಟ್ ಇನ್ನೋವೇಟೀವ್ ಬ್ಯುಸಿನೆಸ್ ಲೀಡರ್ಸ್ ಅವಾರ್ಡ್
ಮಂಗಳೂರು:ಗ್ಲೋಬಲ್ ಲೀಡರ್ಸ್ ಫೌಂಡೇಶನ್ (ಜಿಎಲ್ಎಫ್) ನವದೆಹಲಿ ಅತ್ಯುತ್ತಮ ಸಾಂಸ್ಥಿಕ ನಾಯಕತ್ವದ ಆಧಾರದಲ್ಲಿ ನೀಡುವ ಮೋಸ್ಟ್ ಇನ್ನೋವೇಟೀವ್ ಬ್ಯುಸಿನೆಸ್ ಲೀಡರ್ಸ್ ಅವಾರ್ಡ್ - 2022 ವೈಯಕ್ತಿಕ ಪ್ರಶಸ್ತಿಯು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ( ಎಸ್ ಸಿಡಿಸಿಸಿ ಬ್ಯಾಂಕ್) ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಲಭಿಸಿದೆ.
ಭಾರತದಲ್ಲಿನ ಕಾರ್ಪೊರೇಟ್ ನಾಯಕತ್ವ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಹೊಸ ಅಭಿವೃದ್ಧಿ , ಕಾರ್ಯಕ್ಷಮತೆ ಹಾಗೂ ಅದ್ಬುತ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗ್ಲೋಬಲ್ ಲೀಡರ್ಸ್ ಫೌಂಡೇಶನ್ ನೀಡುತ್ತಿದೆ.
ರಾಜೇಂದ್ರ ಕುಮಾರ್ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಅವಾರ್ಡ್ ಗೆ ಆಯ್ಕೆ ಮಾಡಿದೆ. ಗೋವಾದಲ್ಲಿ ನಡೆಯುವ ಗ್ಲೋಬಲ್ ಲೀಡರ್ ಶಿಪ್ ಶೃಂಗಸಭೆಯಲ್ಲಿ ರಾಜೇಂದ್ರ ಕುಮಾರ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿರುವರು.
Next Story