ಎಸ್ಸೆಸ್ಸೆಫ್ ಕೃಷ್ಣಾಪುರ 7ನೇ ಬ್ಲಾಕ್ ಶಾಖೆ ವತಿಯಿಂದ ಸನ್ಮಾನ
ಮಂಗಳೂರು, ಜೂ.೫: ಎಸ್ಸೆಸ್ಸೆಫ್ ಕೃಷ್ಣಾಪುರ ೭ನೇ ಬ್ಲಾಕ್ ಶಾಖೆಯ ವತಿಯಿಂದ ೨೦೨೧-೨೨ನೆ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಎಸ್ಸೆಸ್ಸೆಫ್ ಕೃಷ್ಣಾಪುರ ೭ನೇ ಬ್ಲಾಕ್ ಸದಸ್ಯರಾದ ಮುಹಮ್ಮದ್ ಮರ್ಝುಖ್ ಅಲಿ (೬೧೪), ಮುಹಮ್ಮದ್ ದಾನಿಶ್ ಮುಹಿಯುದ್ದೀನ್ (೫೬೦), ಮುಹಮ್ಮದ್ ಇಬ್ರಾಹಿಂ ಸೈಫುಲ್ಲಾ (೫೩೮), ಬಾಶಿತ್ (೫೩೬) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ವೈಎಸ್ ಕೃಷ್ಣಾಪುರ ೭ನೇ ಬ್ಲಾಕ್ ಬ್ರಾಂಚ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸ್ವಾದಿಕ್, ಎಸ್ಸೆಸ್ಸೆಫ್ ಮಾಜಿ ನಾಯಕರಾದ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಮುಹಮ್ಮದ್ ಅಸೀಫ್ ಹಾಜಿ, ಹನೀಫ್, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಅಫ್ರಿದ್ ಜಂಕ್ಷನ್, ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್ ರೀಡ್ ಪ್ಲಸ್ ಕಾರ್ಯದರ್ಶಿ ಶಫೀಕ್ ೭ನೇ ಬ್ಲಾಕ್, ಎಸ್ಸೆಸ್ಸೆಫ್ ೭ನೇ ಬ್ಲಾಕ್ ಶಾಖಾ ಅಧ್ಯಕ್ಷ ತೌಝೀಲ್, ಪ್ರಧಾನ ಕಾರ್ಯದರ್ಶಿ ಶಕೀಲ್, ಇಫಾಝ್ ಉಪಸ್ಥಿತರಿದ್ದರು.
Next Story