ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ‘ಈದುಲ್ ಅಝ್ಹಾ’ ಆಚರಣೆ
ಉಳ್ಳಾಲ : ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಅಝ್ಹಾ ನಮಾಝ್ ಹಾಗೂ ಖುತುಬಾ ಪಾರಾಯಣ ನಡೆಯಿತು.
ಅನ್ವರ್ ಅಲಿ ದಾರಿಮಿ ನೇತೃತ್ವ ವಹಿಸಿ ದುಆ ಹಾಗೂ ಖುತುಬಾ ಪಾರಾಯಣ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅವರು ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಪ್ರವಾದಿ ಇಬ್ರಾಹಿಂ ಅವರ ಹಜ್ಜ್ ಹಾಗೂ ಬಲಿದಾನ ನೀಡಿದ್ದನ್ನು ನೆನಪಿಸುತ್ತದೆ. ಈ ವೇಳೆ ನಾವು ಸೌಹಾರ್ದತೆ ಯೊಂದಿಗೆ ಆಚರಿಸಿ ಸಂತೋಷ ಹಂಚಿಕೊಳ್ಳಬೇಕು. ಬಲಿದಾನವನ್ನು ಯಾವುದೇ ಗದ್ದಲ ಇಲ್ಲದೇ ಸಾರ್ವಜನಿಕರಿಗೆ ತೊಂದರೆ ಕೊಡದೇ ನಡೆಸುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕು ಎಂದು ಸಂದೇಶ ನೀಡಿದರು.
ಈ ವೇಳೆ ದರ್ಗಾ ಸಮಿತಿ ಸದಸ್ಯ ಫಾರೂಕ್ ಉಳ್ಳಾಲ್, ಲತೀಫ್ ಚೆರ್ಮೋನು ಉಪಸ್ಥಿತರಿದ್ದರು.