ಮುಸ್ಲಿಂ ಲೀಗ್ನಿಂದ ‘ಬೈತುರ್ರಹ್ಮ’ ಮನೆಯ ಕೀ ಹಸ್ತಾಂತರ
ಬೆಳ್ತಂಗಡಿ : ಬಂಗೇರುಕಟ್ಟೆ ಜಮಾಅತ್ಗೆ ಒಳಪಟ್ಟ ಬಾಬ್ಜಾನ್ ಎಂಬವರ ಕುಟುಂಬಕ್ಕೆ ಮುಸ್ಲಿಂ ಲೀಗ್ ಬಂಗೇರುಕಟ್ಟೆ ವಲಯ ಸಮಿತಿಯು ನಿರ್ಮಿಸಿಕೊಟ್ಟ ‘ಬೈತುರ್ರಹ್ಮ’ ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆಯಿತು.
ಮಾಜಿ ಸಚಿವ ಬಿ ರಮಾನಾಥ ರೈ ಅವರು ಕೀ ಹಸ್ತಾಂತರಿಸಿ ಶುಭ ಹಾರೈಸಿದರು. ಮುಸ್ಲಿಂ ಲೀಗ್ ದ.ಕ.ಜಿಲ್ಲಾಧ್ಯಕ್ಷ ಕೆ.ಎಂ. ಫಯಾಝ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಮುಸ್ಲಿಂ ಲೀಗ್ ಮಾಜಿ ಅಧ್ಯಕ್ಷ ಎಎಸ್ಇ ಕರೀಂ ಕಡಬ, ದಾನಿ ಹಬೀಬ್ ಸಾಹೇಬ್, ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಯು. ಇಸ್ಮಾಯಿಲ್ ಬಿಸಿ ರೋಡ್, ಮುಖಂಡರಾದ ಸಯ್ಯದ್ ಪಿ.ಕೆ. ಬಂಗೇರುಕಟ್ಟೆ, ಅಶ್ರಫ್ ಬಂಗೇರುಕಟ್ಟೆ, ಎಂ.ಆರ್. ಹೈದರ್, ರಹ್ಮಾನ್ ಪಡ್ಪು, ಸಿರಾಜುದ್ದೀನ್, ಕೆ.ಪಿ.ನಝೀರ್ ಮದನಿ ಅಂಡಾಲ್, ನೌಶಾದ್ ಮಲಾರ್, ಇಸ್ರಾರ್ ಗೂಡಿನ ಬಳಿ, ಹಮೀದ್ ಪಿ.ಕೆ., ಆಸಿಫ್ ಪಿ.ಕೆ. ಇಕ್ಬಾಲ್ ಕಲ್ಲಗುಡ್ಡೆ, ಮೆಹರಾಝ್ ಬಂಗೇರುಕಟ್ಟೆ, ಅಬೂಬಕ್ಕರ್ ಬಂಗೇರುಕಟ್ಟೆ, ಅಬ್ದುರ್ರಹ್ಮಾನ್ ಅದ್ದು, ಶಬೀರ್ ಅಝ್ಹರಿ ಪಾಂಡವರಕಲ್ಲು, ಶಿಹಾಬ್ ತಂಙಳ್, ನೌಫಲ್ ಅಜ್ಜಿಕಲ್ಲು, ಹನೀಫ್ ಕುಂಜತ್ತೂರ್, ಉಸ್ಮಾನ್ ಸಾಗ್ ಹಳೆಯಂಗಡಿ, ನಝೀರ್ ಮದನಿ, ರಝಾಕ್ ಪಿಕೆ ಬಂಗೇರುಕಟ್ಟೆ, ಸಾಹಿದ್ ಮಿತ್ತಬೈಲ್ ಉಪಸ್ಥಿತರಿದ್ದರು.