ಬೋಳಿಯಾರ್ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಕೊಣಾಜೆ: ಬೋಳಿಯಾರ್ ಮುಯ್ಯುದ್ದೀನ್ ಜಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಮಸೀದಿ ಧರ್ಮ ಗುರುಗಳಾದ ರಿಯಾಝ್ ರಹ್ಮಾನಿ ಉಸ್ತಾದರು ಧ್ವಜಾರೋಹಣಗೈಯ್ಯುವ ಮೂಲಕ ಆಚರಿಸಲಾಯಿತು.
ಮಸೀದಿ ಅಧ್ಯಕ್ಷರಾದ ಬಿಎಂ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಥಿತಿಗಳಾಗಿ ಕಾರ್ಯದರ್ಶಿ ಯೂಸುಫ್ ಎಂ ಎಸ್, ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ದೇವರಗುಂಡಿ, ನುಸ್ರತುಲ್ ಇಸ್ಲಾಂ ದಫ್ ಕಮಿಟಿ ಅಧ್ಯಕ್ಷರಾದ ಮಜೀದ್ ಪಲ್ಲ, ಎಸ್ಕೆ ಎಸ್ಸೆಸ್ಸೆಫ್ ಅಧ್ಯಕ್ಷ ಅಶ್ರಫ್ ದೇವರಗುಂಡಿ ಉಪಸ್ಥಿತರಿದ್ದರು.
ನೂರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಅಧ್ಯಾಪಕರು, ಜಮಾಅತರು ಭಾಗವಹಿಸಿದ್ದರು.
Next Story