ಉಳ್ಳಾಲ; ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್, ರಹ್ಮಾನಿಯ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ
ಉಳ್ಳಾಲ; ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಪೇಟೆ ಉಳ್ಳಾಲ ಮತ್ತು ರಹ್ಮಾನಿಯ ಜುಮಾ ಮಸೀದಿ ಪೇಟೆ ಉಳ್ಳಾಲ ವತಿಯಿಂದ ಸ್ವಾತಂತ್ರ್ಯ ದ್ವಜಾರೋಹಣ ಕಾರ್ಯಕ್ರಮ ಸೋಮವಾರ ಪೇಟೆ ಮಸೀದಿಯಲ್ಲಿ ನಡೆಯಿತು.
ದ್ವಜಾರೋಹಣವನ್ನು ರಹ್ಮಾನಿಯ ಜುಮಾ ಮಸೀದಿ ಇದರ ಅಧ್ಯಕ್ಷ ಹಾಜಿ ಮೋಹಿದ್ದಿನ್ ಹಸನ್ ಅವರು ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಭಾರತ ಸ್ವಾತಂತ್ರ್ಯಕ್ಕಾಗಿ ಅದೇಷ್ಟು ಮಹಾನ್ ವ್ಯಕ್ತಿಗಳು ವೀರ ಮರಣ ಹೊಂದಿದ್ದಾರೆ. ನಾವು ಈ ಸಮಯದಲ್ಲಿ ಜಾತಿ ಬೇಧ ನೋಡದೆ ಸಮಾಜದಲ್ಲಿ ಶಾಂತಿ ಭಾವೈಕ್ಯತೆಯಿಂದ ನೆಲೆಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೇಟೆ ಜುಮಾ ಮಸೀದಿಯ ಕಾರ್ಯದರ್ಶಿ ಮುಸ್ತಫಾ ಅಹ್ಮದ್ ಮತ್ತು ಪೇಟೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಅವರು ಸಂದೇಶ ಭಾಷಣ ಮಾಡಿದರು.
ವೇದಿಕೆಯಲ್ಲಿ ಪೇಟೆ ಜುಮಾ ಮಸೀದಿಯ ಖಜಾಂಜಿ ಯೂಸುಫ್ ಶರಾಫಾತ್ ಬಸ್ತಿಪಡ್ಪು,ಇಲ್ಯಾಸ್, ಅಝೀಝ್ ಬಸ್ತಿಪಡ್ಪು,ಉಳ್ಳಾಲ ನಗರಸಭೆ ಮಾಜಿ ಸದಸ್ಯ ಪೋಡಿಮೋನು ಇಸ್ಮಾಯಿಲ್, ಪೇಟೆ ಜುಮಾ ಮಸೀದಿ ಮುಹಝೀನ್ ನಾಸಿರ್ ಮುಸ್ಲಿಯಾರ್ ಸದರ್ ಶರೀಫ್ ಮದನಿ ಉಪಸ್ಥಿತರಿದ್ದರು.
ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ತೌಸೀಫ್ ಹುಸೇನ್ ಕಾರ್ಯಕ್ರಮ ನಿರೊಪಿಸಿ ವಂದಿಸಿದರು.