ವೇಣೂರು ಕ್ರಿಸ್ತರಾಜ ದೇವಾಲಯಯ ವಾರ್ಷಿಕ ಉತ್ಸವ
ವೇಣೂರು, ನ.24: ವೇಣೂರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಉತ್ಸವವು ಇತ್ತೀಚೆಗೆ ನಡೆಯಿತು. ಬೆಳ್ತಂಗಡಿ ಚರ್ಚ್ನ ಪ್ರಧಾನ ಧರ್ಮಗುರು ವಂ. ಜೋಸೆಫ್ ಕಾರ್ಡೊಜಾ ಪೂಜಾ ವಿಧಿಗಳನ್ನು ನೆರವೇರಿಸಿ ಸಂದೇಶ ನೀಡಿದರು.
ಬೆಳ್ತಂಗಡಿ ವಲಯದ ಚರ್ಚ್ಗಳ ಧರ್ಮಗುರುಗಳಾದ ಆಳದಂಗಡಿಯ ವಂ. ಎಲಿಯಾಸ್ ಡಿಸೋಜ, ಬದ್ಯಾರಿನ ವಂ. ಮೆಲ್ವಿನ್ ಡಿಸೋಜ, ಗರ್ಡಾಡಿಯ ವಂ. ಅಂತೋನಿ ವಾಸ್, ಇಂದುಬೆಟ್ಟಿನ ವಂ. ಸ್ಟೀಫನ್ ಡಿಸೋಜ, ಮಡಂತ್ಯಾರಿನ ವಂ. ಬೇಸಿಲ್ ವಾಸ್, ಮಂಜೊಟ್ಟಿಯ ವಂ. ಪ್ರವೀಣ್ ಡಿಸೋಜ, ನಾನಾಡುವಿನ ವಂ. ರೋಕಿ ಫೆರ್ನಾಂಡಿಸ್, ನಾಳದ ವಂ. ತೋಮಸ್ ಸಿಕ್ವೇರಾ, ಉಜಿರೆಯ ವಂ. ಜೇಮ್ಸ್ ಡಿಸೋಜ ಬಲಿಪೂಜೆಯಲ್ಲಿ ಸಹಭಾಗಿತ್ವ ನೀಡಿದರು.
ಅರ್ಸುಲೈನ್ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥ ಸಿ. ಕ್ಲಾರಾ ಮೆನೇಜಸ್, ಚರ್ಚ್ ಉಪಾಧ್ಯಕ್ಷ ಡೆನಿಸ್ ಸಿಕ್ವೇರಾ, ಕಾರ್ಯದರ್ಶಿ ಸ್ಟೀವನ್ ಡಿಕುನ್ಹಾ ಮತ್ತಿತರರು ಉಪಸ್ಥಿತರಿದ್ದರು. ಸಿರಿಲ್ ಎಡ್ವರ್ಡ್ ರೆಗೋ ಸ್ವಾಗತಿಸಿದರು. ವೇಣೂರು ಚರ್ಚಿನ ಧರ್ಮಗುರು ವಂ. ಪೀಠರ್ ಅರಾಹ್ನ ವಂದಿಸಿದರು. ಗಾಯನ ಮಂಡಳಿಯ ಮುಖ್ಯಸ್ಥ ಆಲ್ವಿನ್ ಫೆರ್ನಾಂಡಿಸ್ ಮತ್ತು ತಂಡದಿಂದ ಗಾಯನ ನಡೆಯಿತು.