ಮಲ್ಲೂರು: ಆಧಾರ್ ನೋಂದಣಿ ಶಿಬಿರ
ಮಂಗಳೂರು, ಡಿ.8: ಮಲ್ಲೂರು ಟುಡೇ ಮೀಡಿಯಾ ಸೆಂಟರ್ ಹಾಗೂ ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಉಚಿತ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ಇತ್ತೀಚೆಗೆ ದೆಮ್ಮಲೆ ತೌಫೀಕ್ ಎಸೋಸಿಯೇಶನ್ ಕಚೇರಿಯಲ್ಲಿ ನಡೆಯಿತು.
ಮಲ್ಲೂರು ಗ್ರಾಪಂ ಅಧ್ಯಕ್ಷ ಎಂ.ಇ. ಇಸ್ಮಾಯಿಲ್ ಬೊಲ್ಲಂಕಿಣಿ ಕಾರ್ಯಕ್ರಮ ಉದ್ಘಾಟಿಸಿದರು. ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲೂರು ದೆಮ್ಮಲೆ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲೂರು ಟುಡೇ ಮೀಡಿಯಾ ಸೆಂಟರ್ ಅಧ್ಯಕ್ಷ ಜಬ್ಬಾರ್ ಮಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಅತಿಥಿಗಳಾಗಿ ಉದ್ದಬೆಟ್ಟು ಸೈಯದ್ ಹಸನ್ ಹೈದ್ರೋಸ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಹನೀಫ್ ಬೊಲ್ಲಂಕಿಣಿ, ಬದ್ರಿಯಾನಗರ ಅಲ್ ಮಸ್ಜಿದುಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಗ್ರಾಪಂ ಸದಸ್ಯರಾದ ಸುಮಾ ಅರುಣ್ ಶೆಟ್ಟಿ, ಡಿ.ಅಬುಸಾಲಿ ದೆಮ್ಮಲೆ, ತೌಫೀಕ್ ಎಸೋಸಿಯೇಶನ್ ದೆಮ್ಮಲೆ ಅಧ್ಯಕ್ಷ ಮುಹಮ್ಮದ್ ಅಸೀಫ್ ದೆಮ್ಮಲೆ, ಆಧಾರ್ ಸೇವಾ ಕೇಂದ್ರದ ಹೃತಿಕ್, ದೆಮ್ಮಲೆ ಅಂಗನವಾಡಿ ಕೇಂದ್ರದ ಬಿಎಲ್ಒ ಅಲ್ತಾಫ್ ದೆಮ್ಮಲೆ, ಮಲ್ಲೂರು ಟುಡೇ ಮೀಡಿಯಾ ಸೆಂಟರ್ ಮುಖ್ಯ ಸಂಚಾಲಕ ಜಾಬಿರ್ ಉದ್ದಬೆಟ್ಟು ಉಪಸ್ಥಿತರಿದ್ದರು.