ಸಾಮಾಜಿಕ, ಧಾರ್ಮಿಕ ಮುಖಂಡ ಸೂರಲ್ಪಾಡಿ ನೌಶಾದ್ ಹಾಜಿ ನಿಧನಕ್ಕೆ ಯು.ಟಿ ಖಾದರ್ ಸಂತಾಪ
ಮಂಗಳೂರು, ಜ.1: ಸಾಮಾಜಿಕ ಮತ್ತು ಧಾರ್ಮಿಕ ಮುಖಂಡ ಸೂರಲ್ಪಾಡಿ ನೌಶಾದ್ ಹಾಜಿ ಅವರ ನಿಧನಕ್ಕೆ ವಿಧಾನ ಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.
'ವಯಸ್ಸಿಗೂ ಮಿಗಿಲಾದ ಸಾಧನೆಗೈದಿದ್ದ ನೌಶಾದ್ ಹಾಜಿ ಸೂರಲ್ಪಾಡಿ ಸಮುದಾಯದ ಕಣ್ಮಣಿಯಾಗಿದ್ದರು. ತಾಳ್ಮೆಯ ಪ್ರತಿರೂಪವಾಗಿದ್ದ ಅವರು ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದರು' ಎಂದು ಯುಟಿ ಖಾದರ್ ತನ್ನ ಸಂತಾಪದಲ್ಲಿ ತಿಳಿಸಿದ್ದಾರೆ.
ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಸಮೀಪ ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನೌಶಾದ್ ಹಾಜಿ ಸೂರಲ್ಪಾಡಿ ಸಹಿತ ಇಬ್ಬರು ಮೃತಪಟ್ಟ ಘಟನೆ ರವಿವಾರ ಬೆಳಿಗ್ಗೆ ವರದಿಯಾಗಿತ್ತು.
ಇದನ್ನೂ ಓದಿ; ಬೆಳ್ತಂಗಡಿ ಬಳಿ ರಸ್ತೆ ಅಪಘಾತ: ಸಾಮಾಜಿಕ, ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ ಸಹಿತ ಇಬ್ಬರು ಮೃತ್ಯು
Next Story