ವಿಟ್ಲ: ನೂರುಲ್ ಹುದಾ ಎಜುಕೇಶನ್ ಕಾಂಪ್ಲೆಕ್ಸ್ ನಲ್ಲಿ ಮತ ಪ್ರಭಾಷಣ
ವಿಟ್ಲ; ಒಕ್ಕೆತ್ತೂರು ನೂರುಲ್ ಹುದಾ ಎಜುಕೇಷನ್ ಕಾಂಪ್ಲೆಕ್ಸ್ ನಲ್ಲಿ ಏಕದಿನದ ಮತ ಪ್ರಭಾಷಣವು ಕುಟ್ಯಾಡಿ ಸಿರಾಜುಲ್ ಹುದಾ ಸಂಸ್ಥೆಯ ರೂವಾರಿ , ಖ್ಯಾತ ವಿದ್ವಾಂಸ ಶೈಖುನಾ ಪೇರೋಡು ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದ್ ಅವರ ಮುಂದಾಳತ್ವದಲ್ಲಿ ನಡೆಯಿತು.
ಶೈಖುನಾ ವಾಲೆ ಮುಂಡೋವು ಮಹಮೂದುಲ್ ಫೈಝಿ,ಕನ್ಯಾನ ಇಬ್ರಾಹಿಂ ಫೈಝಿ, ತೋಕೆ ಮೊಹ್ಯುದ್ದೀನ್ ಸಖಾಫಿ,ಅಬ್ದುಲ್ ಮಜೀದ್ ಸಖಾಫಿ ಮಲ್ಲಿ,ಇಬ್ರಾಹಿಂ ಕಾಮಿಲ್ ಸಖಾಫಿ ಕೊಡಂಗೆ, ಉಕ್ಕುಡ ಮುದರ್ರಿಸ್ ಹಾಫಿಲ್ ಅಹಮದ್ ಶರೀಫ್ ಕಾಮಿಲ್ ಸಖಾಫಿ,ಅಹಮದ್ ಶೆರೀಫ್ ಸಖಾಫಿ ಮಳಲಿ,ಎಸ್.ಎಂಎ ಯ ರಾಜ್ಯ ಕೋಶಾಧಿಕಾರಿ ಹಮೀದ್ ಹಾಜಿ ಕೊಡಂಗಾಯಿ,ಮುಸ್ತಫಾ ಕೋಡಪದವು,ಮುಸ್ತಫಾ ಹನೀಫಿ ಮುಂತಾದವರು ವೇದಿಕೆಯಲ್ಲಿದ್ದರು.
ಸುರಿಬೈಲ್ ದಾರುಲ್ ಆಶ್ ಅರಿಯ್ಯಾ ದ ಮೆನೇಜರ್ ಮಹಮ್ಮದಾಲಿ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು.
ನೂರುಲ್ ಹುದಾ ಎಜುಕೇಶನ್ ಕಾಂಪ್ಲೆಕ್ಸ್ ನ ಚೇಯರ್ಮ್ಯಾನ್ ಅಬ್ದುರ್ರಶೀದ್ ಸಖಾಫಿ ಪ್ರಸ್ತಾವನೆ ಗೈದರು.
ಎಸ್ಸೆಸ್ಸೆಫ್, ಎಸ್.ವೈ.ಎಸ್, ಎಸ್.ಎಂ.ಎ. ,ಎಸ್.ಜೆ.ಯು, ಎಸ್.ಜೆ.ಎಂ ಸಂಘಟನೆಗಳ ನಾಯಕರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.