ಯುವ ಕ್ಷಾತ್ರ ಅಬ್ಬಕ್ಕ ನಾಡು ಸಂಘದ ಪದಗ್ರಹಣ
ಮಂಗಳೂರು: ಉಳ್ಳಾಲ ರಾಮರಾಜ ಕ್ಷತ್ರಿಯ ಸಮುದಾಯದ ಯುವ ಕ್ಷಾತ್ರ ಅಬ್ಬಕ್ಕ ನಾಡು ಸಂಘದ ಪದಗ್ರಹಣ ಕಾರ್ಯಕ್ರಮವು ಕೊಲ್ಯ ಕುಲಾಲ ಸಭಾಭವನದಲ್ಲಿ ಜರುಗಿತು.
ಉಳ್ಳಾಲ ವಲಯ ರಾಮರಾಜ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಕೊಪ್ಪಲು ಪದಗ್ರಹಣ ನೆರವೇರಿಸಿದರು. ಚೈತ್ರಾ ಕುಂದಾಪುರ, ಪ್ರಮೋದ್ ಕುಮಾರ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಂತಾರ ಚಿತ್ರದ ಸಹಾಯಕ ನಿರ್ದೇಶಕ ಮತ್ತು ನಟ ರಂಜನ್ .ಸಿ.ಎಚ್ ಮತ್ತು ಕಿಕ್ ಬಾಕ್ಸಿಂಗ್ ನಲ್ಲಿ ಸಾಧನೆ ಮಾಡಿದ ಕಾರ್ತಿಕ್ .ಕೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗೌರವಾಧ್ಯಕ್ಷ ಅಮಿತ್ ರಾಜ್ ಬೇಕಲ್, ಅಧ್ಯಕ್ಷ ಅಂಕುಶ್ ಕುಮಾರ್ ಹೂಡೆ , ಉಪಾಧ್ಯಕ್ಷರಾದ ಚಂದನ್ ಕೋಟೆಕಾರ್ ಮತ್ತು ಹರ್ಷಿತಾ ನಿತಿನ್ ಪ್ರಮಾಣ ವಚನ ಸ್ವೀಕರಿಸಿದರು.
ನಂದಗೋಕುಲ ತಂಡ ಶ್ವೇತಾ ಅರೆಹೊಳೆ ನಿರ್ದೇಶನದ ನೃತ್ಯ ವೈಭವ ಪ್ರದರ್ಶನ ಈ ಸಂದರ್ಭದಲ್ಲಿ ಜನರನ್ನು ರಂಜಿಸಿತು.
ಸಹನಾ ಮತ್ತು ನಿತಿನ್ ರಾಜ್ ಕಾರ್ಯಕ್ರಮ ನಿರೂಪಿಸಿದರು.
Next Story