ಬಿ.ಎ ಮುಹಮ್ಮದ್ ಬಂಟ್ವಾಳ್ಕರ್ ನಿಧನ
ಮಂಗಳೂರು,ಮಾ.26: ಬ್ಯಾರಿ ಕಲಾರಂಗದ ಅಝೀಝ್ ಬೈಕಂಪಾಡಿ ಹಾಗೂ ಮಾಜಿ ಡೆಫ್ಯುಟಿ ಮೇಯರ್ ಬಶೀರ್ ಬೈಕಂಪಾಡಿಯವರ ಹಿರಿಯ ಸಹೋದರ ಬಿ. ಎ. ಮುಹಮ್ಮದ್ ಬಂಟ್ವಾಳ್ಕರ್ ಇಂದು (26-03-2023) ಮುಂಜಾನೆ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರ ಮೃತದೇಹವನ್ನು ಬೈಕಂಪಾಡಿ ತರವಾಡು ಮೂಲಸ್ಥಳ ಬಂಟ್ವಾಳ್ ಚೇಂಬರ್ಸ್ ಗೆ ತರಲಾಗುತ್ತಿದ್ದು, ಅಪರಾಹ್ನ 2.30ಕ್ಕೆ ಬೈಕಂಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಸೌಮ್ಯ ಸ್ವಭಾವದ ಸಜ್ಜನರಾಗಿದ್ದ ಮುಹಮ್ಮದ್ ಬಂಟ್ವಾಳ್ಕರ್ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story