-

ದ.ಕ. ಜಿಲ್ಲೆಯಲ್ಲಿ 17,58,647 ಮತದಾರರು: ಡಿಸಿ ರವಿಕುಮಾರ್

-

ಮಂಗಳೂರು, ಮಾ.30: ಕೇಂದ್ರ ಚುನಾವಣಾ ಆಯೋಗವು 2023ರ ಕರ್ನಾಟಕ ವಿಧಾನ ಸಭಾ ಚುನಾವಣಾ ವೇಳಾ ಪಟ್ಟಿಯನ್ನು  ಬುಧವಾರ ಪ್ರಕಟಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಮೇ 15ರ ತನಕ ಜಾರಿಯಲ್ಲಿರುತ್ತದೆ.

ಸುದ್ದಿಗೋಷ್ಠಿಯಲ್ಲಿ  ಗುರುವಾರ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಮತ್ತು ದ.ಕ. ಜಿಲ್ಲಾಧಿಕಾರಿ  ರವಿಕುಮಾರ್ ಎಂ.ಆರ್. ಅವರು ಎಂಟು ವಿಧಾನ  ಸಭಾ ಕ್ಷೇತ್ರದಲ್ಲೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ  ಮಾ.29ರ ತನಕದ ದಾಖಲೆಯಂತೆ 17,58,647 ಮತದಾರರಿದ್ದಾರೆ. ಈ ಪೈಕಿ ಪುರುಷರು 8,60,396, ಮಹಿಳೆಯರು 8,98,176, ತೃತೀಯ ಲಿಂಗಿ 75,  ಬೆಳ್ತಂಗಡಿ 2,25,273, ಮೂಡಬಿದ್ರೆ 2,02,593, ಮಂಗಳೂರು  ನಗರ ಉತ್ತರ 2,46,350, ಮಂಗಳೂರು ನಗರ ದಕ್ಷಿಣ 2,42,407, ಮಂಗಳೂರು 2,02,015,  ಬಂಟ್ವಾಳ 2,24,815, ಪುತ್ತೂರು 2,10,522 ಮತ್ತು ಸುಳ್ಯದಲ್ಲಿ 2,04,672 ಮತದಾರರಿದ್ದಾರೆ.

ಯುವ ಮತದಾರರು: 18-19 ಹರೆಯದ ಒಟ್ಟು 33,577 ಮತದಾರರಿದ್ದಾರೆ. ಯುವ ಮತದಾರರು ಬೆಳ್ತಂಗಡಿಯಲ್ಲಿ 4,180, ಮೂಡಬಿದ್ರೆ 3,612, ಮಂಗಳೂರು ನಗರ ಉತ್ತರ 4,455, ಮಂಗಳೂರು ನಗರ ದಕ್ಷಿಣ 3,462, ಮಂಗಳೂರು 4,509, ಬಂಟ್ವಾಳ 4,715, ಪುತ್ತೂರು 4,412 ಮತ್ತು ಸುಳ್ಯದಲ್ಲಿ 4,232 ಇದ್ದಾರೆ.

ಜಿಲ್ಲೆಯಲ್ಲಿ 531 ಶತಾಯುಷಿಗಳು: ಜಿಲ್ಲೆಯಲ್ಲಿ 80ಕ್ಕಿಂತ ಮೇಲ್ಪಟ್ಟ 46,927 ಮತದಾರರಿದ್ದಾರೆ. ಈ ಪೈಕಿ 80ಕ್ಕಿಂತ ಮೇಲ್ಪಟ್ಟ 38,294, 90ಕ್ಕಿಂತ ಮೇಲ್ಪಟ್ಟ 8,102, 100ಕ್ಕಿಂತ ಮೇಲ್ಪಟ್ಟ 531ಮತದಾರರು ಮತದಾನದ ಹಕ್ಕನ್ನು ಹೊಂದಿದ್ದಾರೆ. ವಿಕಲಚೇತನ ಮತದಾರರು 14,007 ಮಂದಿ ಇದ್ದಾರೆ.

ಚುನಾವಣಾ  ವೇಳಾಪಟ್ಟಿ
ಚುನಾವಣೆ ನೋಟೀಸು ಹೊರಡಿಸುವ ದಿನಾಂಕ : 13-04-2023,
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ : 20-04-2023,
ನಾಮಪತ್ರ ಪರಿಶೀಲನೆ : 21-04-2013
ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯದಿನಾಂಕ : 24-04-2023
ಚುನಾವಣೆ   ನಡೆಯುವ ದಿನಾಂಕ: 10-05-2023
ಮತಎಣಿಕೆ : 13-05-2023., ಸ್ಥಳ: ಎನ್‌ಐಟಿಕೆ ಸುರತ್ಕಲ್
ಚುನಾವಣಾ ಪ್ರಕ್ರಿಯೆ  ಮುಕ್ತಾಯ: 15-05-2023,
ನಾಮಪತ್ರ ಸ್ವೀಕರಿಸುವ ಸ್ಥಳ
*ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ- ಚುನಾವಣಾಧಿಕಾರಿ ತಾಲೂಕು ಆಡಳಿತ ಸೌಧ ,ಬೆಳ್ತಂಗಡಿ
*ಮೂಡಬಿದ್ರೆ-ಚುನಾವಣಾಧಿಕಾರಿ ಕಚೇರಿ ತಾಲೂಕು ಆಡಳಿತ ಸೌಧ, ಮೂಡಬಿದ್ರಿ ತಾಲೂಕು
*ಮಂಗಳೂರು ನಗರ ಉತ್ತರ- ಚುನಾವಣಾಧಿಕಾರಿ ಕಚೇರಿ ತಾಲೂಕು ಆಡಳಿತ ಸೌಧ ಮಂಗಳೂರು
*ಮಂಗಳೂರು ನಗರ ದಕ್ಷಿಣ- ಚುಣಾವಣಾಧಿಕಾರಿ ಕಚೇರಿ ಸಮಿತಿ ಸಭಾಂಗಣ ಮಂಗಳೂರು ಮಹಾ ನಗರಪಾಲಿಕೆ
*ಮಂಗಳೂರು-ಚುನಾವಣಾಧಿಕಾರಿ ಕಚೇರಿ -ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯ ಸಭಾಂಗಣ
*ಬಂಟ್ವಾಳ-ಚುನಾವಣಾಧಿಕಾರಿ ಕಚೇರಿ ತಾಲೂಕು ಆಡಳಿತ ಸೌಧ ಬಂಟ್ವಾಳ
*ಪುತ್ತೂರು-ಚುನಾವಣಾಧಿಕಾರಿ ಕಚೇರಿ ತಾಲೂಕು ಆಡಳಿತ ಸೌಧ ಪುತ್ತೂರು
*ಸುಳ್ಯ-ಚುನಾವಣಾಧಿಕಾರಿ ಕಚೇರಿ ತಾಲೂಕು ಆಡಳಿತ ಸೌಧ  ಸುಳ್ಯ
ಚುನಾವಣಾಧಿಕಾರಿ ವಿವರ
ಬೆಳ್ತಂಗಡಿ -ಎಚ್‌ಆರ್ ಯೋಗೀಶ್
ಮೂಡಬಿದ್ರೆ-ಮಹೇಶ್ಚಂದ್ರ ಕೆ
ಮಂಗಳೂರು ನಗರ ಉತ್ತರ -ಅಭಿಷೇಕ್ ವಿ
ಮಂಗಳೂರು ನಗರ ದಕ್ಷಿಣ-ಕೆಂಪೇಗೌಡ ಎಚ್
ಮಂಗಳೂರು-ರಾಜು .ಕೆ
ಬಂಟ್ವಾಳ-ಅಬಿದ್ ಗಡ್ಯಾಲ್
ಪುತ್ತೂರು-ಗಿರೀಶ್ ನಂದನ್.ಎಂ
ಸುಳ್ಯ-ಅರುಣ ಕುಮಾರ ಸಂಗಾವಿ
ಮತಗಟ್ಟೆಗಳ ವಿವರ:

ದ.ಕ.ಜಿಲ್ಲೆಯಲ್ಲಿ 1,860 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಬೆಳ್ತಂಗಡಿ 241, ಮೂಡಬಿದ್ರೆ 221, ಮಂಗಳೂರು ನಗರ ಉತ್ತರ 244, ಮಂಗಳೂರು ನಗರ ದಕ್ಷಿಣ 244, ಮಂಗಳೂರು 210, ಬಂಟ್ವಾಳ 249, ಪುತ್ತೂರು 220 ಮತ್ತು ಸುಳ್ಯದಲ್ಲಿ 231 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

100 ಮಾದರಿ ಮತಗಟ್ಟೆ: ಜಿಲ್ಲೆಯಲ್ಲಿ 100 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು, ಇದರಲ್ಲಿ ಯಕ್ಷಗಾನ 11, ಕಂಬಳ 11, ಬ್ಲೂವೇವ್ 8, ಹೆರಿಟೇಜ್ 8, ಗೋ ಗ್ರೀನ್ 8, ಎಥಿನಿಕ್‌3, ಪಿಡಬ್ಲ್ಯುಡಿ 3, ಯುವ 8,ಸಖಿ 40 ಮತಗಟ್ಟೆಗಳಿವೆ.

ಕಂಟ್ರೋಲ್  ರೂಂ ದೂ. ನಂಬ್ರ 195 : ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆಯ ಸಂಬಂಧ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಇದರ ದೂರವಾಣಿ ನಂಬ್ರ: 195 ಲೋ ಫ್ರೀ ನಂಬರ್ ಈ ಕಂಟ್ರೋಲ್ ರೂಮ್ ದಿನದ 24 ಗಂಟೆಗಳು ಕಾರ್ಯಚರಣೆ ನಡೆಸುತ್ತಿದ್ದು, ಚುನಾವಣೆಗೆ ಸಂಬಂಧಿಸಿದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡುಬಂದಲ್ಲಿ ಈ ಕಂಟ್ರೋಲ್ ರೂಮ್‌ಗೆ  ಮಾಹಿತಿ ನೀಡಬಹುದು ಹಾಗೂ ಚುನಾವಣೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಪಡೆಯಬಹುದು ಎಂದು ಹೇಳಿದರು.

ಸಿ -ವಿಜಿಲ್  ಮೊಬೈಲ್ ಆ್ಯಫ್ :  ಈ ಬಾರಿ ಸಾರ್ವಜನಿಕರು ಚುನಾವಣಾ ಸಂಬಂಧಿತ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಣಕ್ಕೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಚುನಾವಣಾ ಆಯೋಗವು ಸಿ-ವಿಜಿಲ್ ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಈ  ಆ್ಯಪ್  ಮೂಲಕ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಉಲ್ಲಂಘನೆ ಪ್ರಕಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಫೋಟೋ ಹಾಗೂ ವಿಡಿಯೋಗಳ ಮುಖಾಂತರ ದೂರುಗಳನ್ನು ದಾಖಲಿಸಬಹುದಾಗಿದೆ.

80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನ (ಪಿಡಬ್ಲ್ಯುಡಿ) ಮತದಾರರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಅಗತ್ಯ ವರ್ಗಗಳಿಗೆ ಅಂಚೆ ಮತ ಪತ್ರ ಸೌಲಭ್ಯ ಒದಗಿಸುವ ಸಂಬಂಧ ನೋಡಲ್ ಅಧಿಕಾರಿಯನ್ನಾಗಿ ಅಪರ ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಜಿಲ್ಲಾಮಟ್ಟದ 11 ನೋಡೆಲ್ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ  ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದರು.

10 ಲಕ್ಷ ರೂ. ವಶ: ಭೂತ ಕೋಲ, ಯಕ್ಷಗಾನ, ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಮಾದರಿ ನೀತಿ ಸಂಹಿತೆ ಅನ್ವಯಿಸುವುದಿಲ್ಲ. ಆದರೆ ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಅಥವಾ ಮುಖಂಡರ ಪ್ರಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

10 ದಿನಗಳ ಒಳಗಾಗಿ ಶಸ್ತ್ರಾಸ್ತ್ರ ಅಥವಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು. ಪ್ರಚೋದನಕಾರಿ ಪೋಸ್ಟ್‌ಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ಪ್ರಯತ್ನಗಳನ್ನು ಮಾಡಬಹುದಾದ್ದರಿಂದ ನಾವು ಸಾಮಾಜಿಕ ಮಾಧ್ಯಮವನ್ನು ಸಹ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನೀವು 50,000 ರೂ.ಗಿಂತ ಹೆಚ್ಚಿನ ಹಣವನ್ನು ಕೊಂಡೊಯ್ಯುವಾಗ, ನಗದಿಗೆ  ಸಂಬಂಧಿಸಿದ ಅಗತ್ಯ ದಾಖಲೆಗಳ ಅಗತ್ಯವಿದೆ.

ತಪಾಸಣೆಗೆ 27 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 10 ಅಂತರ್‌ ರಾಜ್ಯ, 8 ಅಂತರ್ ಜಿಲ್ಲಾ ಮತ್ತು 9 ಸ್ಥಳೀಯ ಚೆಕ್ ಫೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.  ಚುನಾವಣಾ ಪೂರ್ವ ತಪಾಸಣೆ ವೇಳೆ 10 ಲಕ್ಷ ರೂ., 200 ಲೀಟರ್ ಮದ್ಯ ಮತ್ತು 65 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸಿಇಒ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ,  ಪೊಲೀಸ್ ಆಯಕ್ತರಾದ ಕುಲದೀಪ್ ಕುಮಾರ್ ಆರ್ ಜೈನ್, ಜಿಲ್ಲಾ ಎಸ್ಪಿ ಡಾ.ವಿಕ್ರಮ ಅಮಟೆ ಉಪಸ್ಥಿತರಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top