ತೊಕ್ಕೊಟ್ಟು: ಬೃಹತ್ ರಕ್ತದಾನ ಶಿಬಿರ
ಉಳ್ಳಾಲ: ಮಸ್ಜಿದುಲ್ ಹುದಾ ತೊಕ್ಕೊಟ್ಟು,ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಉಳ್ಳಾಲ ಇದರ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ , ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವು ಮಸ್ಜಿದುಲ್ ಹುದಾ ತೊಕ್ಕೊಟ್ಟು ವಿನಲ್ಲಿ ಭಾನುವಾರ ನಡೆಯಿತು.
ಮಸ್ಜಿದುಲ್ ಹುದಾ ಮಸೀದಿ ಖತೀಬ್ ಮುಹಮ್ಮದ್ ಕುಂಞಿ ಸಮಾರಂಭ ದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಸೀದಿ ಕೇವಲ ಆರಾಧನೆ ಗೆ ಸೀಮಿತ ಅಲ್ಲ.ಸಾಮಾಜಿಕ ಕಾರ್ಯಕ್ರಮ ಗಳಿಗೂ ಅವಕಾಶ ಇದೆ. ರಕ್ತದಾನ ಮನುಷ್ಯನ ಜೀವ ಉಳಿಸುವ ಕೆಲಸವಾಗಿದ್ದು, ಅದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.
ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೋಶಾಧಿಕಾರಿ ಅಬ್ದುಲ್ ಸಲಾಂ ಸಿಎಚ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಉಳ್ಳಾಲ ವಲಯ ಅಧ್ಯಕ್ಷ ನಝೀರ್ ಹುಸೈನ್, ಯೆನೆಪೋಯ ಮೆಡಿಕಲ್ ಕಾಲೇಜು ಸುಪರಿಂಟೆಂಡೆಂಟ್ ಪ್ರವೀಣ್ ಕುಮಾರ್ ಮಾತನಾಡಿ, ರಕ್ತದಾನ ದ ಮಹತ್ವದ ಬಗ್ಗೆ ವಿವರಿಸಿದರು.
ಕಾರ್ಯಕ್ರಮ ದಲ್ಲಿ ಮಸ್ಜುದುಲ್ ಹುದಾ ಅಧ್ಯಕ್ಷ ಹಸನಬ್ಬ, ಜಮಾತೆ ಇಸ್ಲಾಮಿ ಹಿಂದ್ ಉಳ್ಳಾಲ ಅಧ್ಯಕ್ಷ ಅಬ್ದುಲ್ ಕರೀಂ, ಸುಲೈಮಾನ್ ಮತ್ತಿತರರು ಉಪಸ್ಥಿತರಿದ್ದರು.
ಹಾಫಿಝ್ ಮುಹಮ್ಮದ್ ಪರ್ವೀಸ್ ಕಿರಾಅತ್ ಪಠಿಸಿದರು.ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.ಇರ್ಫಾನ್ ಅಹ್ಮದ್ ಸ್ವಾಗತಿಸಿದರು.