Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಗ್ರಂಥಾಲಯಕ್ಕೊಂದು ಚೌಕಟ್ಟು ನೀಡಿದ ಡಾ....

ಗ್ರಂಥಾಲಯಕ್ಕೊಂದು ಚೌಕಟ್ಟು ನೀಡಿದ ಡಾ. ಎಸ್.ಆರ್. ರಂಗನಾಥನ್

ಇಂದು ರಾಷ್ಟ್ರೀಯ ಗ್ರಂಥಪಾಲಕರ ದಿನ

ಬಾಲಾಜಿ ಟಿ.ಆರ್., ಬೆಂಗಳೂರುಬಾಲಾಜಿ ಟಿ.ಆರ್., ಬೆಂಗಳೂರು12 Aug 2023 7:01 PM IST
share
ಗ್ರಂಥಾಲಯಕ್ಕೊಂದು ಚೌಕಟ್ಟು ನೀಡಿದ ಡಾ. ಎಸ್.ಆರ್. ರಂಗನಾಥನ್

ಆಗಸ್ಟ್ 12ರಂದು ನಾವೆಲ್ಲರೂ ‘ಗ್ರಂಥಪಾಲಕರ ದಿನ’ವನ್ನು ಅಚರಿಸುತ್ತೇವೆ. ಗ್ರಂಥಪಾಲಕರಿಗೆ ಈ ದಿನ ಮಹತ್ವದ ದಿನ. ಏಕೆಂದರೆ, ‘ಗ್ರಂಥಾಲಯದ ಪಿತಾಮಹ’ ಎನಿಸಿರುವ ಡಾ.ಎಸ್.ಆರ್. ರಂಗನಾಥನ್ ಇವರು ಹುಟ್ಟಿದ ದಿನ. ಗ್ರಂಥಾಲಯದಲ್ಲಿ ನಾವು ಓದುವ ಪುಸ್ತಕಗಳನ್ನು, ನಮಗೆ ಸಿಗುವ ಹಾಗೆ ಅವುಗಳ ಹೆಸರು, ಅವುಗಳನ್ನು ರಚಿಸಿದ ಲೇಖಕರ, ಹೆಸರಿನಿಂದ ಮಾರ್ಗದರ್ಶನ ನೀಡಿ, ಗ್ರಂಥಾಲಯ ಉಪಯೋಗಿಸುವವರಿಗೆ ಅವುಗಳ ಸದುಪಯೋಗ ಪಡೆಯಲು, ನೆರವಾದವರು ಎಸ್.ಅರ್. ರಂಗನಾಥನ್‌ರವರು.

ನಮಗೆ ಓದಲು, ಬರೆಯಲು ಪುಸ್ತಕ ಬೇಕು, ಅದರೆ ಅದನ್ನು ರ್ಯಾಕ್‌ನಿಂದ ತೆಗೆದು ನಾವು ಬಳಸಲು ನಮಗೆ ನೆರವಾಗುವವರು ಗ್ರಂಥಪಾಲಕರು. ಅವರು ಪುಸ್ತಕಗಳಿಗೆ ಒಂದು ಸಂಖ್ಯೆಯನ್ನು ಕೊಟ್ಟಿರುತ್ತಾರೆ, ಅದನ್ನು ಗ್ರಂಥಸೂಚಿ ಮತ್ತು ವಿಷಯವಾರು ವಿಂಗಡಿಸಿರುತ್ತಾರೆ. ಪ್ರತೀ ಪುಸ್ತಕಗಳಿಗೂ ಒಂದು ನಂಬರ್ ಇರುತ್ತದೆ. ಅದರಿಂದಾಗಿಯೇ ಗ್ರಂಥಪಾಲಕರು ನಮಗೆ ಬೇಕಾದ ಪುಸ್ತಕವನ್ನು ಸಲೀಸಾಗಿ ಹುಡುಕಿ ಕೊಡುತ್ತಾರೆ. ಈ ವಿಷಯವಾರು ವರ್ಗೀಕರಣ, ಅದರ ನಂಬರ್ ಇತ್ಯಾದಿಗಳ ಬಗ್ಗೆ ಜಗತ್ತಿಗೆ ಪರಿಚಯಿಸಿದವರು ಡಾ. ಎಸ್.ಆರ್. ರಂಗನಾಥನ್‌ರವರು. ನಮ್ಮ ದೇಶವಲ್ಲದೆ ವಿದೇಶಗಳ ಗ್ರಂಥಾಲಯಗಳಲ್ಲಿ ಕೂಡ ಇವರ ತತ್ವವನ್ನು ಪಾಲಿಸಿ ಗ್ರಂಥಾಲಯ ಸೇವೆ ನೀಡಲಾಗುತ್ತದೆ.

ಡಾ. ಎಸ್.ಆರ್. ರಂಗನಾಥನ್‌ರವರು ಆಗಸ್ಟ್ 9ರಂದು ಹುಟ್ಟಿದ್ದರೂ ಅವರನ್ನು ಶಾಲೆಗೆ ಸೇರಿಸುವಾಗ 12 ಎಂದು ಬರೆಸಿದ್ದರಿಂದ ಅವರ ಜನ್ಮ ದಿನಾಂಕ ಅಗಸ್ಟ್ 12ರಂದೇ ಅಚರಣೆಗೆ ಬಂತು. ಅವರು ಸಿದ್ಧ ಪಡಿಸಿದ ಪಂಚಸೂತ್ರಗಳು ಗ್ರಂಥಾಲಯದ ಜೀವನಾಡಿಯಾಗಿದ್ದು ಗ್ರಂಥಪಾಲಕರಿಗೆ ವರದಾನವಾಗಿದೆ. ಎಲ್ಲ ಗ್ರಂಥಾಲಯದಲ್ಲಿಯೂ ಇದನ್ನು ಪ್ರದರ್ಶಿಸಿರುತ್ತಾರೆ. ಅವು ಯಾವುವೆಂದರೆ:

1. ಪುಸ್ತಕಗಳು ಸದುಪಯೋಗಕ್ಕೆ ಓದಿಗಾಗಿ ಇವೆ.

2. ಪ್ರತಿ ಪುಸ್ತಕಕ್ಕೂ ಒಬ್ಬ ಓದುಗನಿದ್ದಾನೆ.

3. ಪ್ರತಿ ಓದುಗನಿಗೂ ಒಂದು ಪುಸ್ತಕವಿದೆ.

4. ಓದುಗನ ಸಮಯದ ಉಳಿತಾಯದ ಅಗತ್ಯವಿದೆ.

5. ಗ್ರಂಥಾಲಯ ಒಂದು ಸಂಘಟಿತ ಕ್ಷೇತ್ರ ಅಥವಾ ಕೇಂದ್ರವಾಗಿದೆ.

ಇಂತಹ ಸೂತ್ರಗಳನ್ನು ಜಗತ್ತಿಗೆ ನೀಡಿದ ಮಹನೀಯನ ನೆನೆಯುವುದು ನಮ್ಮ ಮಹತ್ವದ ಕೆಲಸವಲ್ಲವೆ?

ತಂಜಾವೂರು ಜಿಲ್ಲೆಯ ಶೀಯಾಳಿಯಲ್ಲಿ 1892 ಅಗಸ್ಟ 9ರಂದು ರಾಮನುಜ ಅಯ್ಯರ್ ಮತ್ತು ಸೀತಾಲಕ್ಷ್ಮೀಯವರ ಸುಪುತ್ರನಾಗಿ ಜನಿಸಿದ ಡಾ. ಎಸ್.ಆರ್. ರಂಗನಾಥನ್ 1913ರಲ್ಲಿ ಬಿ.ಎ. ಪದವಿಯ ಆನಂತರ ಗಣಿತವನ್ನು ಐಚ್ಚಿಕ ವಿಷಯವಾಗಿ ಅಯ್ಕೆ ಮಾಡಿ ಎಂ.ಎ. ಪದವಿ ಪಡೆದರು. 1917ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ, 1921ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಣಿತ ಶಾಸ್ತ್ರದ ಸಹಾಯಕ ಉಪನ್ಯಾಸಕರಾಗಿ ಕೆಲಸ ಮಾಡಿದರು. 1924ರಲ್ಲಿ ಮದ್ರಾಸಿನ ವಿಶ್ವವಿದ್ಯಾನಿಲಯದ ಗ್ರಂಥಾಲಯದ, ಗ್ರಂಥಪಾಲಕರ ಹುದ್ದೆಗೆ ಕರೆ ಬಂದು ಅದನ್ನು ವಹಿಸಿಕೊಂಡರು. ಮುಂದೆ ಇವರು ಹೆಚ್ಚಿನ ತರಬೇತಿ ಪಡೆಯಲು ಲಂಡನ್‌ಗೆ ಹೋದರು. ಅಲ್ಲಿ ಗ್ರಂಥಗಳ ವರ್ಗೀಕರಣ, ಅವುಗಳ ಪದ್ಧತಿಯಲ್ಲಿದ್ದ ಲೋಪದೋಷಗಳ ಬಗ್ಗೆ ಅದ್ಯಯನ ನಡೆಸಿ ಅವುಗಳ ನಿವಾರಣೆಗೆ ‘ದ್ವಿಬಿಂದು’ ವರ್ಗೀಕರಣ ಪದ್ಧತಿಯನ್ನು ಅನುಷ್ಠಾನಕ್ಕೆ ತಂದರು. ಈ ತರಬೇತಿಯಿಂದ ಇವರು ಮದ್ರಾಸಿನ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಮೊತ್ತ ಮೊದಲು ಓಪನ್ ಅಸೆಸ್-ಮುಕ್ತದ್ವಾರ ಪದ್ಧತಿ ಜಾರಿಗೆ ತಂದರು. ಈ ಪದ್ಧತಿಯಿಂದ ಸಾರ್ವಜನಿಕ ಓದುಗರು ತಮ್ಮ ಪುಸ್ತಕಗಳನ್ನು ತಾವೇ ಆರಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ಬಂತು. 1931-1933ರವರೆಗೆ ಇವರು ಬರೆದ ಗ್ರಂಥಗಳ ವರ್ಗೀಕರಣ ಸೂತ್ರಗಳ ಪುಸ್ತಕಗಳು ಪ್ರಕಟವಾಗಿ ಜನಮನ್ನಣೆ ಪಡೆದವು. 1944ರವರೆಗೂ ಮದ್ರಾಸಿನ ವಿಶ್ವವಿದ್ಯಾನಿಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದರು. ಬನಾರಸ್ ವಿಶ್ವವಿದ್ಯಾನಿಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದಾರೆ. 1959ರಲ್ಲಿ ಇವರು ನಿವೃತ್ತಿ ಹೊಂದಿದರು. ನಿವೃತ್ತಿಯ ನಂತರ ಕೂಡ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು. 1964ರಲ್ಲಿ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯ ಡಿ.ಲಿಟ್. ಪದವಿ ನೀಡಿ ಗೌರವಿಸಿತು. ಅಮೆರಿಕದ ಮಾರ್ಕಟ್ಟೇನ್ ಸೊಸೈಟಿ ‘ಗ್ರ್ಯಾಂಡ್ ನೈಟ್ ಅಫ್ ದಿ ಪೀಸ್’’ ಎಂಬ ಗೌರವ ನೀಡಿದೆ. 1935ರಲ್ಲಿ ಭಾರತ ಸರಕಾರ ‘ರಾವ್ ಸಾಹೇಬ್’ ಪ್ರಶಸ್ತಿ, 1952ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರ ಮಾರ್ಗದರ್ಶನ ಎಲ್ಲ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ವರದಾನವಾಗಿದೆ. ಜಗತ್ತಿನ ಎಲ್ಲ ಗ್ರಂಥಾಲಯದ ಸುಧಾರಣೆಗೆ ಶ್ರಮಿಸಿ, ಓದಲು ಬರುವ ಓದುಗ ಮಿತ್ರರಿಗೆ ಸಕಾಲದಲ್ಲಿ ಬೇಕಾದ ಮಾಹಿತಿಯನ್ನು ಒದಗಿಸಲು, ಗ್ರಂಥಪಾಲಕರು ಪ್ರಾಯೋಗಿಕವಾಗಿ ಜಾರಿಗೆ ತರಲು ಅವರು ನೀಡಿದ ಸೂತ್ರಗಳು ನೆರವಾಗಿದೆ. ಇವರನ್ನು ‘ಗ್ರಂಥಾಲಯದ ಪಿತಾಮಹ’ ಎಂದು ಕರೆಯಲಾಗುತ್ತಿದೆ. ವೇಗದ ಬದುಕಿನ ಈ ಕಂಪ್ಯೂಟರ್ ಯುಗದಲ್ಲಿ ಕೂಡ ಇವರು ಪ್ರಸ್ತುತವೆನಿಸುತ್ತಾರೆ. ಅವರ ಜನ್ಮದಿನಕ್ಕೆ ನಮನಗಳು.

share
ಬಾಲಾಜಿ ಟಿ.ಆರ್., ಬೆಂಗಳೂರು
ಬಾಲಾಜಿ ಟಿ.ಆರ್., ಬೆಂಗಳೂರು
Next Story
X