-

ಮುಸ್ಲಿಂ ಯುವಕನಿಗೆ ಕಿಡ್ನಿ ದಾನ ಮಾಡಿದ ಕ್ರೈಸ್ತ ಪಾದ್ರಿ

-

ಫೆಬ್ರವರಿ ಎಂದರೆ ಎಲ್ಲರಿಗೂ ಪ್ರೇಮಿಗಳ ದಿನಾಚರಣೆ  ನೆನಪಾಗುತ್ತದೆ. ಆದರೆ ಮೂರು ವರ್ಷಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ ಕೇರಳದ ಅಳಪ್ಪುಳ ದಲ್ಲಿ ಇಬ್ಬರು ವ್ಯಕ್ತಿಗಳು ಅದೇ ಪ್ರಥಮ ಬಾರಿ ಭೇಟಿಯಾಗುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರೂ ಅಪರಿಚಿತರು. ಒಬ್ಬರು ಕ್ರೈಸ್ತ ಪಾದ್ರಿ. ಇನ್ನೊಬ್ಬ ಮುಸ್ಲಿಂ ಯುವಕ. ಆದರೆ ಅವರಲ್ಲೊಬ್ಬರು ತೆಗೆದುಕೊಂಡ ದೃಢ  ನಿರ್ಧಾರ ಇನ್ನೊಬ್ಬನ ಜೀವನವನ್ನೇ ಬದಲಾಯಿಸಿತು, ಅಲ್ಲ ಉಳಿಸಿತು. ಮಾನವ ಪ್ರೇಮದ ಇದಕ್ಕಿಂತ ಉತ್ತಮ ಉದಾಹರಣೆ ಬಹುಶ: ನಮ್ಮ ಸಮೀಪದಲ್ಲೆಲ್ಲೂ ಸಿಗದು. ಆ ಭೇಟಿಯ ಮೂರನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಅದನ್ನು ಮತ್ತೆ ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇವೆ. ಇದು ನಮ್ಮ ವೆಲೆಂಟೈನ್ ಡೇ ಸ್ಪೆಶಲ್ ! ಯಾಕೆಂದರೆ ಕೆಲವು ವಿಷಯಗಳು ನೆನಪು ಮಾಡಿಕೊಂಡಷ್ಟು ಅದರಿಂದ ಪ್ರೇರೇಪಣೆ, ಚೈತನ್ಯ ಸಿಗುತ್ತದೆ . 

ಫೆಬ್ರವರಿ 25, 2013 . ಫಾದರ್ ಕೆ . ಸೆಬಾಸ್ಟಿಯನ್ ಅವರು ಕೇರಳದ ಚಾಲುಕ್ಕುಡಿಯಿಂದ ಎರ್ನಾಕುಲಂಗೆ ಹೋಗುವ ಬಸ್ಸಿನಲ್ಲಿ ಪ್ರಯಾನಿಸುತ್ತಿದ್ದರು. ಪೆರುಂಬವೂರ್ ಎಂಬಲ್ಲಿ ವ್ಯಕ್ತಿಯೊಬ್ಬ ಬಸ್ಸಿಗೆ ಹತ್ತಿ ಫಾದರ್ ಪಕ್ಕದ ಸೀಟಿನಲ್ಲೇ ಕುಳಿತ. ನೋಡಲು ತೀವ್ರ ಬಳಲಿದಂತಿದ್ದ ಆತನ ಕೈಯಲ್ಲಿ ಆಸ್ಪತ್ರೆಯ ಫೈಲ್ ಗಳಿದ್ದವು. ಆತನನ್ನು ಮಾತನಾಡಿಸಿದ ಫಾದರ್ ಗೆ ಆತನ ಅವಸ್ಥೆ ಕಂಡು ಮರುಕ ಹುಟ್ಟಿತು.ಆತನ ಹೆಸರು ರಸದ್ ಮೊಹಮ್ಮದ್ . ಅಲಪ್ಪುಳ ಜಿಲ್ಲೆಯ ಹರಿಪದ್ ಎಂಬ ಊರಿನವನು. ಸೌದಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸದಲ್ಲಿದ್ದ. ಇದ್ದಕ್ಕಿದ್ದಂತೆ ಆತನ ದೃಷ್ಟಿ ಮಂದವಾಯಿತು. ವೈದ್ಯಕೀಯ ಪರೀಕ್ಷೆಗಳ ಬಳಿಕ ಕಿಡ್ನಿ ಸಮಸ್ಯೆ ಇದೆ ಎಂದು ಗೊತ್ತಾಯಿತು. ಮತ್ತೆ ಅನಿವಾರ್ಯವಾಗಿ ಕೆಲಸ ಬಿಟ್ಟು ಊರಿಗೆ ಬರಬೇಕಾಯಿತು. ಇಲ್ಲಿಗೆ ಬಂದ ಮೇಲೆ ಆತನ ಸಮಸ್ಯೆ ಉಲ್ಬಣವಾಗುತ್ತಾ ಹೋಯಿತು. ಕೊನೆಗೆ ಕಿಡ್ನಿ ಕಸಿ ಮಾಡದೆ ಮೊಹಮ್ಮದ್ ನ ಜೀವ ಉಳಿಸಲು ಬೇರೆ ದಾರಿಯೇ ಇಲ್ಲ ಎಂದು ವೈದ್ಯರು ಕೈ ಎತ್ತಿದರು. ಆದರೆ ಕಿಡ್ನಿ ಅಷ್ಟು ಸುಲಭದಲ್ಲಿ ಸಿಗುತ್ತದೆಯೇ ? ಏಜೆಂಟ್ ಒಬ್ಬ ಎರಡೂವರೆ ಲಕ್ಷ ರೂಪಾಯಿಗೆ ಕಿಡ್ನಿ ಕೊಡಿಸುತ್ತೇನೆ ಎಂದು ಹೇಳಿ ಮೂರು "ದಾನಿಗಳನ್ನು" ಕರೆದುಕೊಂಡು ಬಂದರೂ ಅವರ ಕಿಡ್ನಿ ಈತನಿಗೆ ಹೊಂದಾಣಿಕೆ ಆಗಲಿಲ್ಲ. ನಾಲ್ಕನೇ "ದಾನಿ"ಯ ಕಿಡ್ನಿ ಓಕೆ ಆದರೂ ಆತ ಕೊನೆ ಕ್ಷಣದಲ್ಲಿ ಹಿಂದೆ ಸರಿದುಬಿಟ್ಟ. ಹಾಗಾಗಿ ಮೊಹಮ್ಮದ್ ಈಗ ಚಿಂತಾಜನಕ ಪರಿಸ್ಥಿತಿಯಲ್ಲಿ ಇದ್ದ. 

ಇಷ್ಟು ವಿಷಯ ಕೇಳಿದ ಮೇಲೆ ಮೊಹಮ್ಮದ್ ನಲ್ಲಿ  ಫಾದರ್ ಸೆಬಾಸ್ಟಿಯನ್ ಕೇಳಿದ್ದು ಒಂದೇ ಪ್ರಶ್ನೆ . ನಿನ್ನ ರಕ್ತದ ಗುಂಪು ಯಾವುದು ? " ಎ ಪ್ಲಸ್ "  ಎಂದು ಮೊಹಮ್ಮದ್ ಉತ್ತರಿಸಿದ. ಅಲ್ಲಿಗೆ ಫಾದರ್ ತಮ್ಮ ಜೀವನದ ಬಹುದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು. " ನನ್ನದೂ ಎ ಪ್ಲಸ್. ನನ್ನ ಕಿಡ್ನಿ ನಿನಗೆ ಹೊಂದಾಣಿಕೆ ಆದರೆ ನಾನು ನನ್ನ ಒಂದು ಕಿಡ್ನಿಯನ್ನು ನಿನಗೆ ದಾನ ಮಾಡುತ್ತೇನೆ " ಎಂದು ಬಿಟ್ಟರು  ಫಾದರ್ ! ಆದರೆ ಮೊಹಮ್ಮದ್ ಅದನ್ನು ನಂಬಲಿಲ್ಲ . ನಂಬುವುದಾದರೂ ಹೇಗೆ ? 

ಆತನ ದೂರವಾಣಿ ಸಂಖ್ಯೆ ಪಡೆದ ಫಾದರ್ ಮರುದಿನ ಕರೆ ಮಾಡಿ ಆತನೊಂದಿಗೆ ತಾನೂ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುತ್ತೇನೆ ಎಂದು ಹೇಳಿದಾಗಲೇ ಮೊಹಮ್ಮದ್ ನಂಬಿದ್ದು . 

ಫಾದರ್ ತನ್ನ ಮಾತಿನಂತೆ ಆಸ್ಪತ್ರೆಗೆ ಹೋದರು. ಎಲ್ಲ ಪರೀಕ್ಷೆಗಳು ನಡೆದವು. ಒಂದು ತಿಂಗಳಲ್ಲಿ ಫಾದರ್ ಕಿಡ್ನಿ ಮೊಹಮ್ಮದ್ ಗೆ ಹೊಂದಾಣಿಕೆ ಆಗುತ್ತದೆ ಎಂದು ವೈದ್ಯರು ಘೋಷಿಸಿದರು. ಆದರೆ ಅದರ ನಂತರ ಎರಡು ತಿಂಗಳು ಉಳಿದ ಕಾನೂನು , ದಾಖಲೆ  ಪ್ರಕ್ರಿಯೆಗಳು ನಡೆದವು. ಫಾದರ್ ಅವರು ಬಿಷಪ್ ರಿಂದ ಅನುಮತಿ ಪಡೆಯಬೇಕಿತ್ತು . ಹಾಗು ಅವರ ಮನೆಯವರಿಂದ ನಿರಾಕ್ಷೇಪಣೆ ಪತ್ರ ಪಡೆಯಬೇಕಿತ್ತು. ಅವರು ಒಪ್ಪುವರೇ ಎಂದು ಫಾದರ್ ಗೆ ಹಿಂಜರಿಕೆ ಇತ್ತು. ಉಳಿದೆಲ್ಲ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಮನೆಯವರ ಅನುಮತಿ ಕೇಳಿದರು, ನಿರಾಕರಿಸಬಾರದು ಎಂಬ ಬಲವಾದ ಮನವಿಯೊಂದಿಗೆ. ಆದರೆ ಆಶ್ಚರ್ಯವೆಂದರೆ, ಎಲ್ಲರೂ ಅವರನ್ನು ಬೆಂಬಲಿಸಿದರು. " ಸಾಮಾನ್ಯ ಇಂಜೆಕ್ಷನ್ ತೆಗೆದುಕೊಳ್ಳುವಾಗಲೇ ಒಂದು ರೀತಿಯ ಹಿಂಜರಿಕೆ ಆಗುತ್ತದೆ. ಆದರೆ ಈ ವಿಷಯದಲ್ಲಿ ನನಗೆ ಒಂಚೂರೇ ಚೂರು ಭಯವಾಗಲಿಲ್ಲ. ಅದು ದೇವರ ದಯೆ " ಎನ್ನುತ್ತಾರೆ ಫಾದರ್ ಸೆಬಾಸ್ಟಿಯನ್. ಜೂನ್ ಒಂದರಂದು ಫಾದರ್ ರ ಒಂದು ಕಿಡ್ನಿ ಮೊಹಮ್ಮದ್ ದೇಹಕ್ಕೆ ಯಶಸ್ವಿಯಾಗಿ ಕಸಿಯಾಯಿತು. 

ಮೊಹಮ್ಮದ್ ಗೆ ಕೇವಲ 30 ವರ್ಷ ವಯಸ್ಸು. ಆದರೆ ಕಿಡ್ನಿ ಕೊಟ್ಟ ಫಾದರ್ ಏನೂ ವೃದ್ದರಲ್ಲ. ಅವರಿಗೆ ಆಗ ಕೇವಲ 42 ವರ್ಷ ವಯಸ್ಸು. ಆದರೂ ಅವರು ಅಷ್ಟು ಬೇಗ ಕಿಡ್ನಿ ದಾನ ಮಾಡಲು ನಿರ್ಧರಿಸಲು ಕಾರಣವೇನು ? " ನನ್ನ ಎದುರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಒಬ್ಬ ಯುವಕ ನಿಂತಿದ್ದ. ನನಗೆ ಬೇರೇನೂ ಯೋಚಿಸುವ ಅಗತ್ಯವೇ ಬೀಳಲಿಲ್ಲ. ಹೇಗೂ ನಮಗೆ ಒಂದು ಕಿಡ್ನಿಯೊಂದಿಗೆ ಬದುಕಬಹುದು " ಎಂಬುದು ಫಾದರ್ ಉತ್ತರ . ಇದರ ಹಿಂದೆ ಇನ್ನೊಂದು ಬಲವಾದ ಕಾರಣವಿತ್ತು . ೨೦೦೯ರಲ್ಲಿ ಫಾದರ್ ಡೇವಿಸ್ ಚಿರಮೆಲ್ ಎಂಬವರು ಒಬ್ಬ ಅಪರಿಚಿತ ಹಿಂದೂವಿಗೆ ತನ್ನ ಒಂದು ಕಿಡ್ನಿ ದಾನ ಮಾಡಿದ್ದರು. ಅದರ ಬಗ್ಗೆ ಕೇಳಿದಾಗಲೇ ಫಾದರ್ ಸೆಬಾಸ್ಟಿಯನ್  ಅದೇ ರೀತಿ ಮಾಡಬೇಕೆಂದು ಪ್ರತಿಜ್ಞೆ ಮಾಡಿದ್ದರು. ಆ ಪ್ರತಿಜ್ಞೆ ಮಾಡಿದ ಬಳಿಕ ಅವರಿಗೆ ಕಿಡ್ನಿಯ ಅಗತ್ಯದೊಂದಿಗೆ ಸಿಕ್ಕಿದ ಮೊದಲ ವ್ಯಕ್ತಿ ಮೊಹಮ್ಮದ್ . ಅಲ್ಲಿಗೆ ಅವರು ನಿರ್ಧಾರ ಮಾಡಿಬಿಟ್ಟರು. " ಈ ವಿಷಯ ಫಾದರ್ ಚಿರಮೆಲ್ ಅವರಿಗೆ ತಿಳಿದಾಗ ಈ ವಿಷಯವನ್ನು ಬಹಿರಂಗಪಡಿಸಲೇ ಬೇಕು ಎಂದು ಅವರು ಹೇಳಿದರು. ನನಗೆ ಪ್ರಚಾರ ಬೇಡ ಎಂದು ನಿರ್ಧರಿಸಿದ್ದರೂ ಇತರರಿಗೆ ಪ್ರೇರಣೆಯಾಗಲು ಇದನ್ನು ಬಹಿರಂಗಪಡಿಸಬೇಕಾಯಿತು"  ಎಂದು ಫಾದರ್ ಹೇಳಿದರು. 

ಫಾದರ್ ಚಿರಮೆಲ್ ಅವರಿಂದ ಪ್ರೇರಣೆ ಪಡೆದು ಈವರೆಗೆ ಕನಿಷ್ಠ ಹನ್ನೊಂದು ಪಾದ್ರಿಗಳು, ಐವತ್ತು ಮಂದಿ ಇತರರು ಅಪರಿಚಿತರಿಗೆ ಕಿಡ್ನಿ ದಾನ ಮಾಡಿದ್ದಾರೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top