ನ. 16 ರಂದು ಕೆಸಿಎಫ್ ದುಬೈ ನೋರ್ತ್ ಝೋನ್ ವತಿಯಿಂದ ‘ಮೀಲಾದ್ ಸಮಾವೇಶ’
ದುಬೈ, ನ,8: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ನೋರ್ತ್ ಝೋನ್ ಇದರ ವತಿಯಿಂದ ‘ಇಲೈಕ ಯಾ ರಸೂಲಲ್ಲಾಹ್’ ಎಂಬ ಶೀರ್ಷಿಕೆಯಲ್ಲಿ ನಡೆಯುವ ಮೀಲಾದ್ ಸಮಾವೇಶ ನವೆಂಬರ್ 16 ರಂದು ದುಬೈ ಕಾಲಮಾನ ಸಂಜೆ 6 ಗಂಟೆಗೆ ಸ್ಟೇಡಿಯಂ ಮೆಟ್ರೋ ಸ್ಟೇಷನ್ ಹತ್ತಿರದ ಕ್ರೆಸೆಂಟ್ ಸ್ಕೂಲ್ ಅಲ್ ಖಿಸೈಸ್ ನಲ್ಲಿ ನಡೆಯಲಿದೆ.
ದ.ಕ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಅಲ್ ಫಝಲ್ ಕೋಯಮ್ಮ ಕೂರತ್ ತಂಙಳ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಲಿದ್ದಾರೆ. ನೌಫಲ್ ಸಖಾಫಿ ಕಳಸ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಕೆಸಿಎಫ್, ಎಸ್ಸೆಸ್ಸೆಫ್, ಎಸ್ ವೈಎಸ್ ಇದರ ಜಂಟಿ ಆಶ್ರಯದಲ್ಲಿ ‘ಕನೆಕ್ಟ್-2018 ಸಾಮುದಾಯಿಕ ಸಮ್ಮಿಲನ’ ಡಿಸೆಂಬರ್ 3 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ 11 ಜೋಡಿ ಸಾಮೂಹಿಕ ವಿವಾಹ, ಮೀಲಾದ್ ರ್ಯಾಲಿ ಹಾಗು ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದೆಯೆಂದು ಪ್ರಕಟನೆ ತಿಳಿಸಿದೆ.
Next Story