Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಕೊರೋನ ಸುದ್ದಿಗೆ ಏಕಿಷ್ಟು ಮಹತ್ವ?

ಕೊರೋನ ಸುದ್ದಿಗೆ ಏಕಿಷ್ಟು ಮಹತ್ವ?

ವಾರ್ತಾಭಾರತಿವಾರ್ತಾಭಾರತಿ26 Dec 2023 11:03 AM IST
share
ಕೊರೋನ ಸುದ್ದಿಗೆ ಏಕಿಷ್ಟು ಮಹತ್ವ?

✍ ದಮ್ಮಪ್ರಿಯ ಬೆಂಗಳೂರು |

ಮಾಧ್ಯಮಗಳು ಮತ್ತೊಮ್ಮೆ ಕೊರೋನ ಸುದ್ದಿಯನ್ನು ದಿನವಿಡೀ ಪ್ರಸಾರ ಮಾಡಲು ಆರಂಭಿಸಿ ಜನತೆಯನ್ನು ಆತಂಕಕ್ಕೆ ದೂಡುತ್ತಿವೆ. ಭಾರತೀಯ ಬಹುಸಂಖ್ಯಾತ ಜನರು ಈಗಾಗಲೇ ಹಲವಾರು ತೊಂದರೆಗಳಿಂದ ತತ್ತರಿಸಿಹೋಗಿದ್ದಾರೆ. ಹಿಂದಿನ 2019ರ ಕೋವಿಡ್ ಮಹಾಮಾರಿಯಿಂದ ಸಾಮಾನ್ಯ ಜನರ ಬದುಕು ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿಗೆ ತಲುಪಿದೆ. ಅಂದಿನ ಭಾರತದ ‘ಲಾಕ್ಡೌನ್’ ವ್ಯವಸ್ಥೆಗೆ ಇಂದಿಗೂ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಅಂದಿನ ವ್ಯವಸ್ಥೆ ಇನ್ನೆಂದೂ ಬರಬಾರದು ಎನ್ನುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮಾನಸಿಕ ವೇದನೆಯಾಗಿದೆ. ದುಡಿಯುವ ಯುವಕರು ಮತ್ತೆ ಉದ್ಯೋಗ ಕಳೆದುಕೊಂಡು ಬೀದಿಪಾಲಾಗುತ್ತೇವೇನೋ ಎನ್ನುವ ಆತಂಕ ನಿರ್ಮಾಣವಾಗಿದೆ. ಹಾಗಾಗಿ ಕೊರೋನ ಸುದ್ದಿಗಳನ್ನು ವಿಜೃಂಭಿಸುವ ಮುನ್ನ ಮಾಧ್ಯಮಗಳು ಇನ್ನಾದರೂ ಸಾಕಷ್ಟು ಯೋಚಿಸಬೇಕಾಗಿದೆ.

ದೇಶದಲ್ಲಿ ಅಪೌಷ್ಟಿಕತೆಯಿಂದ ದಿನನಿತ್ಯ ಸಾವಿರಾರು ಹಸುಗೂಸುಗಳು ನರಳಿ ಸಾಯುತ್ತಿರುವಾಗ, ಹೆಣ್ಣು ಮಕ್ಕಳು ತಾಯಿಯ ಗರ್ಭದಲ್ಲಿಯೇ ಭ್ರೂಣಹತ್ಯೆ ಎನ್ನುವ ಅಮಾನವೀಯ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿರುವಾಗ, ಧರ್ಮ-ಜಾತಿಗಳ ನೆಪಗಳಲ್ಲಿ ಸಾವಿರಾರು ಜನರ ಹತ್ಯೆ ನಡೆಯುತ್ತಿರುವಾಗ ಕೊರೋನ ಎನ್ನುವ ವೈರಸ್ ಇವೆಲ್ಲವುಗಳಿಗಿಂತ ಭೀಕರವೇ?. ಜಾತಿ ಧರ್ಮದ ನೆರಳಲ್ಲಿ ನಡೆಯುವ ರಾಜಕಾರಣದ ಮುಂದೆ ಕೊರೋನ ಯಾವ ಲೆಕ್ಕ?

ಈಗ ನಮ್ಮನ್ನಾಳುವವರಿಂದ ನಮ್ಮ ಸಂವಿಧಾನವನ್ನು ಎಷ್ಟು ವಿರೂಪಗೊಳಿಸಲು ಸಾಧ್ಯವೋ ಅಷ್ಟೆಲ್ಲಾ ಯತ್ನಗಳು ಸತತವಾಗಿ ನಡೆಯುತ್ತಲೇ ಇವೆ. ಈಗ ಜನರನ್ನು ಚುನಾವಣೆಯ ನೆಪದಲ್ಲಿ ದಿಕ್ಕು ತಪ್ಪಿಸಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಹೊರಟಿರುವ ಸರಕಾರಕ್ಕೆ ತಾವು ಮಾಡಿರುವ ಸಾಧನೆ ಮತ್ತು ಮುಂದಿನ ಗುರಿ ಹೇಳಿಕೊಳ್ಳಲಾಗುತ್ತದೆಯೇ.

ತಮ್ಮ ಅವಧಿಯಲ್ಲಿ ಎಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಯಿತು? ರೂ. 500, 1,000 ಮುಖ ಬೆಲೆಯ ನೋಟಿನ ರದ್ದತಿಯಿಂದ ಎಷ್ಟು ಕಪ್ಪು ಹಣವನ್ನು ಹೊರ ತೆಗೆಯಲಾಯಿತು.? ರೈಲ್ವೆ ಉದ್ದಿಮೆಯನ್ನು ಖಾಸಗಿಯವರ ಕೈಗೊಪ್ಪಿಸಿದ ಮೇಲೆ ಎಷ್ಟು ಲಾಭ ಭಾರತದ ಖಜಾನೆಗೆ ಬಂದು ಸೇರಿತು? ಬಂದರು, ವಿಮಾನ ಯಾನ ಎಲ್ಲವನ್ನು ಖಾಸಗಿಯವರಿಗೆ ನೀಡಿದ ಮೇಲೆ ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ಎಷ್ಟನೇ ಸ್ಥಾನದ್ಲಲಿದೆ? ಕಳೆದ 10 ವರ್ಷಗಳ ಆಳ್ವಿಕೆಯಲ್ಲಿ ರೈತರ ಎಷ್ಟು ಸಾಲವನ್ನು ಮನ್ನಾ ಮಾಡಲಾಯಿತು? ಕಾರ್ಪೊರೇಟ್ ಕಂಪೆನಿಗಳ ಸಾಲ ಕಳೆದ 10 ವರ್ಷಗಳಲ್ಲಿ ಸುಮಾರು ರೂ. 15.50 ಲಕ್ಷ ಕೋಟಿಗೂ ಹೆಚ್ಚಾಗಿ ರೈಟಪ್ ಮಾಡಿದ ಹಾಗೆ ಸಾಮಾನ್ಯ ಜನರ ಸಾಲವನ್ನು ಎಷ್ಟು ಮನ್ನಾ ಮಾಡಲಾಗಿದೆ? ದೇಶದ ಲಾಭದಾಯಕ ಬ್ಯಾಂಕುಗಳನ್ನು ವಿಲೀನ ಮಾಡಿ ಸಾಧಿಸಿದ್ದೇನು? 2019 ರ ಚುನಾವಣೆಗೂ ಮುನ್ನಾ ಸುಮಾರು 1ಲಕ್ಷದ 71 ಸಾವಿರ ಕೋಟಿ ತುರ್ತು ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಯಿತು? ಸಹಸ್ರಾರು ಬಿಎಸ್ಎನ್ಎಲ್ ಟವರ್ಗಳನ್ನು ಜಿಯೋ ಆಗಿ ಪರಿವರ್ತಿಸಿ, ಬಿಎಸ್ಎನ್ಎಲ್ ನೌಕರರ ಬಾಯಿಗೆ ಮಣ್ಣು ಹಾಕಿದ್ದಾಯಿತು. ಹಾಗಾದರೆ ಜಿಯೋ ಕಂಪೆನಿಯವರು ಸರಕಾರಕ್ಕೆ ನೀಡಿದ ಲಾಭವೆಷ್ಟು? ಇದಕ್ಕೆಲ್ಲ ಉತ್ತರ ಕೊಡುವವರು ಯಾರು?

ಈ ಎಲ್ಲದರ ಬಗ್ಗೆ ನಿರಂತರ ಪ್ರಶ್ನಿಸಬೇಕಾದ ಮಾಧ್ಯಮಗಳು ಮತ್ತೆ ಕೋವಿಡ್ನ ಹಿಂದೆ ಬಿದ್ದಿರುವುದು ಯಾರನ್ನು ಮೆಚ್ಚಿಸಲು?

ಕೋವಿಡ್-19 ಸಂದರ್ಭದಲ್ಲಾದ ಅವಾಂತರಗಳಿಂದ ಜನಸಾಮಾನ್ಯರ, ಕೆಳವರ್ಗಗಳ ಆರ್ಥಿಕತೆಯ ಸೊಂಟ ಮುರಿದಿದೆ. ಈಗ ಮತ್ತೊಮ್ಮೆ ಕೊರೋನ ಎನ್ನುವ ವೈರಸನ್ನು ಎಲ್ಲರ ತಲೆಯಲ್ಲೂ ತುಂಬುತ್ತಿರುವ ಮಾಧ್ಯಮಗಳು ನಿರೀಕ್ಷಿಸುತ್ತಿರುವುದಾದರೂ ಏನನ್ನು?

Tags

Corona
share
ವಾರ್ತಾಭಾರತಿ
ವಾರ್ತಾಭಾರತಿ
Next Story
X