Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಒಳ ಮೀಸಲಾತಿಯ ಹೆಜ್ಜೆ ಗುರುತುಗಳು

ಒಳ ಮೀಸಲಾತಿಯ ಹೆಜ್ಜೆ ಗುರುತುಗಳು

ಎಸ್. ಮೂರ್ತಿಎಸ್. ಮೂರ್ತಿ18 May 2025 9:00 AM IST
share
ಒಳ ಮೀಸಲಾತಿಯ ಹೆಜ್ಜೆ ಗುರುತುಗಳು
ಭಾರತ ಸಂವಿಧಾನದ ಈ ಮೀಸಲಾತಿ ಅವಕಾಶಗಳನ್ನು ಪಡೆದ, ಅಸ್ಪಶ್ಯ ಮತ್ತಿತರ ಶೋಷಿತ ಜಾತಿಗಳು ದೇಶದ ಸಾರ್ವಜನಿಕ ಸೇವೆಗಳಲ್ಲಿ; ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಳಲ್ಲಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಪಡೆದರು. ಮುಂದುವರಿದು, ಫಲ ಪಡೆದವರೇ ತಮ್ಮ ತಮ್ಮ ಕುಟುಂಬ ಮತ್ತು ತಮ್ಮ ಉಪಜಾತಿಗಳಿಗೆ ಫಲಗಳನ್ನು ಕೊಡಿಸಲು, ಉಳಿದ ಉಪಜಾತಿಗಳಿಗೆ ಆ ಫಲಗಳು ಸಿಗದಂತೆ ಮಾಡಲು ಮುಖವಾಡ ಧರಿಸಿದರು. ಸ್ವಾರ್ಥಿಗಳಾದರು. ಪರಿಶಿಷ್ಟರ ಒಳಗೆ ಪ್ರಬಲ, ದುರ್ಬಲ ಗುಂಪುಗಳನ್ನು ಸೃಷ್ಟಿಸಿದರು. ಅಂಬೇಡ್ಕರ್ ಸಿದ್ಧಾಂತಗಳಿಗೆ, ಸಂವಿಧಾನದ ಆಶಯಗಳಿಗೆ ಚೂರಿ ಹಾಕಿದರು.

‘ಹಿಂದೂ’ ಸಮಾಜವು ಏಕಸ್ವರೂಪಿ ಸಮಾಜವಲ್ಲ. ಹಿಂದೂಗಳಲ್ಲಿ ಇರುವಷ್ಟು ವಿವಿಧತೆ ಮತ್ತೆಲ್ಲೂ ಕಾಣಲಾಗದು. ನಾಗರಿಕತೆಯೆಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದ ಕ್ರಿಸ್ತಪೂರ್ವ ಕಾಲದಿಂದಲೇ ಈ ದೇಶದ ಸಮಾಜ ರಚನೆಯಲ್ಲಿ ಜಾತಿ, ಉಪಜಾತಿಗಳು ಉದ್ಯೋಗ ಆಧಾರಿತವಾಗಿ ನಂತರ ಜನ್ಮ ಆಧಾರಿತವಾಗಿ ಹಾಸುಹೊಕ್ಕಾಗಿವೆ. ವೃತ್ತಿ ಮತ್ತು ಕಾಯಕಗಳನ್ನು ಸಮಾನಾಂತರ ರೂಪದಲ್ಲಿ ನೋಡದೆ, ಶ್ರೇಣೀಕೃತ ರೂಪದಲ್ಲಿ ನೋಡುವ ಕಾಯಿಲೆಗೆ, ರೋಗಕ್ಕೆ ಶತಶತಮಾನಗಳ ಹಿಂದೆಯೇ ಸಮಾಜ ಬಲಿಯಾಗಿದೆ.

ಜಾತಿ, ಅಸ್ಪಶ್ಯತೆ, ಅಸಮಾನತೆಗಳ ವಿರುದ್ಧ ಈ ಮಣ್ಣಿನಲ್ಲಿ ಬಸವಣ್ಣನವರು, ಕನಕದಾಸರು, ಶರಣರು, ದಾಸರು ಧ್ವನಿ ಎತ್ತಿದರು. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1920ರಲ್ಲಿ ಮೊದಲ ಬಾರಿಗೆ ಮೀಸಲಾತಿ ನೀತಿ ಮೈಸೂರು ಪ್ರಾಂತದಲ್ಲಿ ಜಾರಿಗೆ ತಂದರು. ಬ್ರಿಟಿಷರು, ಲಾರ್ಡ್ ಮೆಕಾಲೆ, ಜ್ಯೋತಿಬಾ ಫುಲೆ, ಅಂಬೇಡ್ಕರ್ ಇತರ ರಾಷ್ಟ್ರ ನಾಯಕರು ಈ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದರು. ಆದರೂ ಜಾತಿ, ಅಸ್ಪಶ್ಯತೆ, ಅಸಮಾನತೆ ಹೋಗಲಿಲ್ಲ. ಇದನ್ನು ಮನಗಂಡು, ಮುಂದೆ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು, ಡಾ. ಬಿ.ಆರ್. ಅಂಬೇಡ್ಕರ್ ಶತಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಿಗೆ ಭಾರತದ ಸಂವಿಧಾನದಲ್ಲಿ ಮೀಸಲಾತಿ/ಪ್ರಾತಿನಿಧ್ಯ, ಅಸ್ಪಶ್ಯತಾ ನಿವಾರಣೆಗೆ ಅವಕಾಶಗಳನ್ನು ಕಲ್ಪಿಸಿದರು. ಅವುಗಳು ಮೂಲಭೂತ ಹಕ್ಕುಗಳೆಂದು ಘೋಷಿಸಿದರು.

ಭಾರತ ಸಂವಿಧಾನದ ಈ ಮೀಸಲಾತಿ ಅವಕಾಶಗಳನ್ನು ಪಡೆದ, ಅಸ್ಪಶ್ಯ ಮತ್ತಿತರ ಶೋಷಿತ ಜಾತಿಗಳು ದೇಶದ ಸಾರ್ವಜನಿಕ ಸೇವೆಗಳಲ್ಲಿ; ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಳಲ್ಲಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಪಡೆದರು. ಮುಂದುವರಿದು, ಫಲ ಪಡೆದವರೇ ತಮ್ಮ ತಮ್ಮ ಕುಟುಂಬ ಮತ್ತು ತಮ್ಮ ಉಪಜಾತಿಗಳಿಗೆ ಫಲಗಳನ್ನು ಕೊಡಿಸಲು, ಉಳಿದ ಉಪಜಾತಿಗಳಿಗೆ ಆ ಫಲಗಳು ಸಿಗದಂತೆ ಮಾಡಲು ಮುಖವಾಡ ಧರಿಸಿದರು. ಸ್ವಾರ್ಥಿಗಳಾದರು. ಪರಿಶಿಷ್ಟರ ಒಳಗೆ ಪ್ರಬಲ, ದುರ್ಬಲ ಗುಂಪುಗಳನ್ನು ಸೃಷ್ಟಿಸಿದರು. ಅಂಬೇಡ್ಕರ್ ಸಿದ್ಧಾಂತಗಳಿಗೆ, ಸಂವಿಧಾನದ ಆಶಯಗಳಿಗೆ ಚೂರಿ ಹಾಕಿದರು. ಸಂವಿಧಾನ ಜಾರಿಗೊಂಡು 7 ದಶಕಗಳೇ ಉರುಳಿದರೂ, ಕೆಲವು ಶೋಷಿತ ದುರ್ಬಲ ಸಮುದಾಯಗಳಿಗೆ ಸಂವಿಧಾನದ ಅವಕಾಶಗಳು, ಹಕ್ಕುಗಳು ಸಿಗದಂತೆ ಮಾಡಿದರು. ಇದರಿಂದ ಅಸಮಾನತೆ ಮುಂದುವರಿಯಿತು. ಅಂದಾಜು 70ನೇ ದಶಕದಿಂದ ರಾಷ್ಟ್ರ ವ್ಯಾಪಿ, ಜಾತಿಗಳ ಗುಂಪಿನ ಒಳಗೆ ಅನ್ಯಾಯಕ್ಕೆ ಒಳಗಾದವರು ಪ್ರತಿಭಟನೆ, ಸತ್ಯಾಗ್ರಹ, ಕಾಲ್ನಡಿಗೆ ಜಾಥಾ ಇತ್ಯಾದಿಗಳನ್ನು ಪ್ರಾರಂಭಿಸಿದರು.

ಒಳ ಮೀಸಲಾತಿ ಅನುಷ್ಠಾನ

1. 1975ರಲ್ಲಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಗ್ಯಾನಿ ಜೈಲ್ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಮಜಬಿ ಸಿಖ್ ಜಾತಿಯವರಿಗೆ ಶೇ.50 ಒಳಮೀಸಲಾತಿ ಕಲ್ಪಿಸಿತು.

2. 1991-92ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಪರಿಶಿಷ್ಟ ಜಾತಿ ಒಳಗಿನ ಅರುಂಧತಿ ಜಾತಿಯವರಿಗೆ ಒಟ್ಟು ಶೇ. 15ರ ಮೀಸಲಾತಿಯಲ್ಲಿ ಪಾಲು ಜೊತೆಗೆ, ಹೆಚ್ಚುವರಿಯಾಗಿ ಶೇ.3 ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸಿದರು.

3. 1994ರಲ್ಲಿ ಹರ್ಯಾಣದ ಮುಖ್ಯಮಂತ್ರಿ ಭಜನ್ ಲಾಲ್ ರು ಪರಿಶಿಷ್ಟ ಜಾತಿ ಒಳಗಿನ ಬಾಲ್ಮೀಕಿ ಜಾತಿಯವರಿಗೆ ಶೇ.50 ಒಳ ಮೀಸಲಾತಿ ಕಲ್ಪಿಸಿದರು.

4. 1999-2000ದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ‘ಪರಿಶಿಷ್ಟ ಮೀಸಲಾತಿಯ ಪುನರ್ ವರ್ಗೀಕರಣ ಕಾಯ್ದೆ’ಯನ್ನು ಜಾರಿಗೆ ತಂದು, ಪರಿಶಿಷ್ಟ ಜಾತಿಗಳ ಪಟ್ಟಿ ಒಳಗಿನ ಎಲ್ಲರಿಗೂ, ಅವರ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿಯನ್ನು ಕಲ್ಪಿಸಿದರು.

5. 2025ರಲ್ಲಿ ತೆಲಂಗಾಣ, ಹಿಮಾಚಲ ಪ್ರದೇಶ, ಹರ್ಯಾಣ, ಇನ್ನು ಕೆಲವು ರಾಜ್ಯಗಳು ಒಳ ಮೀಸಲಾತಿ ಜಾರಿಯನ್ನು ಘೋಷಣೆ ಮಾಡಿವೆ.

ಆಂಧ್ರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಪಟ್ಟಿ ಒಳಗಿನ ಮಾಲ ಜಾತಿಗೆ ಸೇರಿದ ಇ.ವಿ.ಚಿನ್ನಯ್ಯ ಇವರು ಆಂಧ್ರಪ್ರದೇಶ ಸರಕಾರ 1999-2000ದಲ್ಲಿ ಅನುಷ್ಠಾನಕ್ಕೆ ತಂದ, ಒಳ ಮೀಸಲಾತಿ ಆದೇಶವನ್ನು ಆಂಧ್ರ ಪ್ರದೇಶ ಹೈಕೋರ್ಟಿನಲ್ಲಿ, ತರುವಾಯ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ, ಕರ್ನಾಟಕ ಮೂಲದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದ ಐವರ ಪೀಠ ದಿನಾಂಕ 5-5-2004ರಂದು ತೀರ್ಪು ಪ್ರಕಟಿಸಿ: ‘‘ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಪಂಗಡಗಳನ್ನು ಮಾರ್ಪಾಡು ಮಾಡುವ, ವಿಂಗಡಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ’’ ಎಂದು ಆಂಧ್ರಪ್ರದೇಶ ಜಾರಿಗೆ ತಂದಿದ್ದ ಒಳ ಮೀಸಲಾತಿ ಆದೇಶವನ್ನು ರದ್ದುಪಡಿಸಿತು. ಇದರಿಂದ ರಾಷ್ಟ್ರದ ಯಾವುದೇ ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿ ಅನುಷ್ಠಾನ ಮಾಡುವ ಅಧಿಕಾರ ಇಲ್ಲದಂತಾಯಿತು.

ಈ ತೀರ್ಪನ್ನು ಆಧಾರ ಮಾಡಿಕೊಂಡು ದವಿಂದರ್ ಸಿಂಗ್ ಎನ್ನುವವರು ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳು ಈ ಹಿಂದೆ ಜಾರಿ ಮಾಡಿದ್ದ ಒಳ ಮೀಸಲಾತಿ ಆದೇಶಗಳನ್ನು ರದ್ದುಪಡಿಸಬೇಕೆಂದು ಪಂಜಾಬ್-ಹರ್ಯಾಣ ಹೈಕೋರ್ಟಿನಲ್ಲಿ ದಾವೆ ಹೂಡಿದರು. ತರುವಾಯ ಇದು ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರ ಪೀಠ ದಿನಾಂಕ 27-8-2020ರಂದು ತೀರ್ಪನ್ನು ಪ್ರಕಟಿಸಿತು:

‘‘ಬುಟ್ಟಿ ಒಳಗಿನ ಹಣ್ಣುಗಳು ಹಸಿದವರಿಗೆ, ದುರ್ಬಲರಿಗೆ ಸಿಗದೆ, ತಾಕತ್ತಿದ್ದವರ ಪಾಲಾಗುವುದನ್ನು ನೋಡಿ ಸುಮ್ಮನಿರಲಾಗದು. ಇಂತಹ ಸಾಮಾಜಿಕ ವಾಸ್ತವಗಳನ್ನು ಏಕ ಸ್ವರೂಪದ ಸಮುದಾಯದಡಿಯಲ್ಲಿ ಮುಚ್ಚಿಡಲಾಗದು. ಮೀಸಲಾತಿಯ ಹಂಚಿಕೆ ಸಾಮಾಜಿಕ ನ್ಯಾಯದ ಭಾಗವೇ ಆಗಿದೆ’’.

ಮುಂದುವರಿದು ಸದರಿ ಪೀಠವು, ‘‘ನಮಗೆ ಮತ್ತೊಂದು ಐವರ ಪೀಠದ ತೀರ್ಪನ್ನು ಪರಿಶೀಲಿಸಲಾಗದು. ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯಸ್ಥರು ಏಳು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರ ಪೀಠ ರಚಿಸಿ ಈ ವಿಷಯವನ್ನು ಆ ಪೀಠಕ್ಕೆ ವರ್ಗಾಯಿಸಬೇಕು’’ ಎಂದು ತೀರ್ಪಿನಲ್ಲಿ ತಿಳಿಸಿತು.

ಅದರಂತೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ 7 ನ್ಯಾಯಮೂರ್ತಿಗಳ ಪೀಠ ನ್ಯಾ. ಸಂತೋಷ್ ಹೆಗ್ಡೆ ಮತ್ತು ನ್ಯಾ. ಅರುಣ್ ಮಿಶ್ರಾ ನೇತೃತ್ವದ ಎರಡು ಭಿನ್ನ ತೀರ್ಪುಗಳನ್ನು ಪರಿಶೀಲಿಸಿ, ದಿನಾಂಕ 1-8-2024ರಂದು ತನ್ನ ತೀರ್ಪನ್ನು ಪ್ರಕಟಿಸಿತು:

‘‘ಭಾರತ ಸಂವಿಧಾನದ ಅವಕಾಶಗಳಡಿ, ರಾಜ್ಯ ಸರಕಾರಗಳು ಪರಿಶಿಷ್ಟ ಜಾತಿಗಳನ್ನು ಉಪವರ್ಗೀಕರಿಸುವ ಅಧಿಕಾರವನ್ನು ಹೊಂದಿವೆ. ಈ ವರ್ಗದೊಳಗೆ ಅನನುಕೂಲಕರ ಗುಂಪುಗಳನ್ನು ಗುರುತಿಸಲು ಮತ್ತು ಅವರಿಗೆ ಹೆಚ್ಚು ಕೇಂದ್ರೀಕೃತ ಪ್ರಯೋಜನಗಳನ್ನು ಒದಗಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ’’.

ಈ ತೀರ್ಪಿನ ತರುವಾಯ, ಯಾವುದೇ ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿಗಳನ್ನು ಅನುಷ್ಠಾನ ಮಾಡಲು ನಿರ್ಬಂಧಗಳು ಇಲ್ಲ.

ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿಯ ಹೆಜ್ಜೆಗಳು, ಪ್ರಶ್ನಿಸಲಾಗದ ಹೇಡಿತನ

1. 1990ರ ದಶಕದಿಂದ ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾಗಿ ಮಾದಿಗ ಜಾತಿಯವರು, ಅವರ ಸಂಘಟನೆಗಳು/ ರಾಜಕಾರಣಿಗಳು, ಒಳಮೀಸಲಾತಿ ಬೇಡಿಕೆ ಇಟ್ಟುಕೊಂಡು ಹೋರಾಟ, ಸತ್ಯಾಗ್ರಹ, ಕಾಲ್ನಡಿಗೆ ಜಾಥಾ, ಸಾವು ನೋವುಗಳನ್ನು ಎದುರಿಸಿದ್ದಾರೆ, ಅನುಭವಿಸಿದ್ದಾರೆ. ಅನುಭವಿಸುತ್ತಿದ್ದಾರೆ;

2. 2004ರಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನು ಒಳ ಮೀಸಲಾತಿ ಸಂಬಂಧ ನೇಮಕ ಮಾಡಿತು;

3. ಈ ಆಯೋಗವು ಸುಮಾರು 7 ವರ್ಷಗಳ ಕಾಲ ಅಧ್ಯಯನ ನಡೆಸಿ, ದಿನಾಂಕ 14-7-2012ರಂದು ಬಿಜೆಪಿ ಸರಕಾರದ ಮುಖ್ಯಮಂತ್ರಿ ಸದಾನಂದ ಗೌಡ ಇವರಿಗೆ ವರದಿ ನೀಡಿತು;

4. 2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ, ಕಾನೂನು ಸಚಿವ ಮಾಧುಸ್ವಾಮಿಯವರ ನೇತೃತ್ವದಲ್ಲಿ, ಸಂಪುಟ ಉಪಸಮಿತಿ ರಚನೆ ಮಾಡಿ, ಒಳಮೀಸಲಾತಿ ಸಂಬಂಧ ವರದಿ ನೀಡಲು ಸೂಚಿಸಿತು;

5. ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ನೀಡಿದ ವರದಿಯನ್ನು ಆದರಿಸಿ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸಿ ದಿನಾಂಕ 27-3-2023ರಂದು ಸರಕಾರಿ ಆದೇಶವನ್ನು ಹೊರಡಿಸಿತು. ಈ ಆದೇಶದಲ್ಲಿಯೇ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕಾರಣಗಳನ್ನು ನೀಡದೆ ‘ಮುಕ್ತಾಯ’ಗೊಳಿಸಿ ರುವುದಾಗಿ ಘೋಷಿಸಿತು. ಸರ್ವೋಚ್ಚ ನ್ಯಾಯಾಲಯದ ನ್ಯಾ. ಸಂತೋಷ್ ಹೆಗ್ಡೆಯವರ ತೀರ್ಪಿನ ತೊಡಕುಗಳಿಂದ ಈ ಆದೇಶ ಅನುಷ್ಠಾನ ಆಗಲಿಲ್ಲ;

6. ಮುಂದೆ, ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠ ದಿನಾಂಕ 1-8-2018ರಂದು ನೀಡಿದ ತೀರ್ಪಿನ ತರುವಾಯ, ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಳಮೀಸಲಾತಿ ಅನುಷ್ಠಾನ ಸಂಬಂಧ ಅನುಕ್ರಮವಾಗಿ ದಿನಾಂಕ 12-11-2024 ಮತ್ತು 3-12-2024ಗಳಂದು ಸರಕಾರಿ ಆದೇಶವನ್ನು ಹೊರಡಿಸಿ, ಮಾಜಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚನೆ ಮಾಡಿದೆ;

7. ಈ ಆಯೋಗವು ದಿನಾಂಕ 27-3-2025ರಂದು ಸರಕಾರಕ್ಕೆ ಮಧ್ಯಂತರ ವರದಿಯನ್ನು ನೀಡಿ, ಆದಿ ಕರ್ನಾಟಕ, ಆದಿ ದ್ರಾವಿಡ, ಮತ್ತು ಆದಿ ಆಂಧ್ರ ಈ ಹೆಸರಿನಲ್ಲಿ ಮಾದಿಗರು ಮತ್ತು ಹೊಲೆಯ ಜಾತಿಯ ಇಬ್ಬರೂ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಕಾರಣದಿಂದ ಇವರ ಜನಸಂಖ್ಯೆಯನ್ನು ನಿಖರವಾಗಿ ತಿಳಿಯಲು ಕಷ್ಟವಾಗಿದೆ. ವಾಸ್ತವ ತಿಳಿಯುವುದಕ್ಕಾಗಿ, ಈ ವರ್ಗಗಳ ಜಾತಿಗಣತಿ ಅನಿವಾರ್ಯವೆಂದು ಸರಕಾರಕ್ಕೆ ವರದಿಯಲ್ಲಿ ತಿಳಿಸಿದೆ.

8. ಸಿದ್ದರಾಮಯ್ಯ ಸರಕಾರ ಕೂಡ ದಿನಾಂಕ 27-3-2025ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ವರ್ಗಗಳ ಜಾತಿಗಣತಿಯನ್ನು ವೈಜ್ಞಾನಿಕವಾಗಿ ಮಾಡಲು ತೀರ್ಮಾನ ತೆಗೆದುಕೊಂಡಿದೆ. ಆದರೆ ಈವರೆಗೆ ಈ ಬಗ್ಗೆ ಯಾವುದೇ ಸರಕಾರಿ ಆದೇಶ ಹೊರಬಂದಿಲ್ಲ.

9. ರಾಜ್ಯವ್ಯಾಪಿ ಮಾದಿಗ ಸಂಘಟನೆಗಳು ಕಾಲ್ನಡಿಗೆ ಜಾಥಾ, ಸತ್ಯಾಗ್ರಹ, ಹೋರಾಟಗಳನ್ನು ಪುನರ್ ಪ್ರಾರಂಭಿಸಿವೆ. ಮಾದಿಗರಲ್ಲಿ ಜಾಗೃತಿ ಮೂಡಿಸುತ್ತಿವೆ. ಇತ್ತ ಹೊಲೆಯ ಜಾತಿಯ ಸಂಘಟನೆಯ ಕೆಲವು ನಾಯಕರು ಅಂಬೇಡ್ಕರ್ ಭವನದಲ್ಲಿ ಒಂದು ಸಭೆ ನಡೆಸಿ ಜಾಗೃತಿ ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಹೆಚ್ಚುವರಿ ಸಭೆ ಏರ್ಪಡಿಸುವ ಉದ್ದೇಶ ಹೊಂದಿದ್ದಾರೆ. ಮತ್ತೊಂದೆಡೆ, ಕೆಲವು ಕಿಡಿಗೇಡಿಗಳು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ತರಾವರಿ ಸುದ್ದಿ ಬಿಡುತ್ತಿದ್ದಾರೆ.

10. ಈ ಗೊಂದಲಗಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರೇ ಕೆಳಕಂಡಂತೆ ನಾಗರಿಕರನ್ನು ವಿನಂತಿಸಿದ್ದಾರೆ:

ಪರಿಶಿಷ್ಟ ಜಾತಿ ಮೀಸಲಾತಿ ಉಪವರ್ಗೀಕರಣಕ್ಕಾಗಿ (ಒಳಮೀಸಲಾತಿಗಾಗಿ) ಮನೆಮನೆ ಸಮೀಕ್ಷೆ ಮಾಡುವುದು ಖಚಿತ. ಯಾವುದೇ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ಏನೂ ಗೊತ್ತಿಲ್ಲದೆ ಬರೆಯುವ ಅಪ್ರಯೋಜಕ ವರದಿಗಳ ಬಗ್ಗೆ ಸಮುದಾಯಗಳು ಕಿವಿಗೊಡಬಾರದು.

11. 2014ರಲ್ಲಿ ರಚಿಸಲಾಗಿದ್ದ ಕಾಂತರಾಜು ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸಿ ನೀಡಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ವರದಿಯನ್ನು ಹಾಲಿ ಸರಕಾರ ಸ್ವೀಕರಿಸಿತ್ತು. ದಿನಾಂಕ 11-4-2025ರಂದು ಜರುಗಿದ ಸಚಿವ ಸಂಪುಟದ ಸಭೆಯಲ್ಲಿ ಸದರಿ ವರದಿಯನ್ನು ಈಗ ಮಂಡಿಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸದರಿ ವರದಿ ಬಗ್ಗೆ ತೀರ್ಮಾನವನ್ನು ಪ್ರಕಟಿಸುವುದಾಗಿ ಸರಕಾರ ತಿಳಿಸಿದೆ. ಈ ವರದಿ ಒಳಗಿನ ಎಸ್ಸಿ/ಎಸ್ಟಿ ಅಂಕಿ ಅಂಶಗಳು ಒಳ ಮೀಸಲಾತಿಗೆ ಅನುಕೂಲವಾಗಬಹುದು.

12. ಕಾಂತರಾಜು ವರದಿಯಲ್ಲಿ ನಮೂದಿಸಿದ ಎಸ್ಸಿ/ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಈಗಾಗಲೇ ರಾಜ್ಯದಲ್ಲಿ ಹೆಚ್ಚಳ ಮಾಡಲಾಗಿದೆ. ಜೊತೆಗೆ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆ ಮತ್ತು ಸವಲತ್ತುಗಳಲ್ಲಿ ಅವರ ಪ್ರಮಾಣಗಳನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಕಾಂತರಾಜು ವರದಿಯಿಂದ, ಒಬಿಸಿಯವರಿಗೆ ಹೆಚ್ಚು ಅನುಕೂಲ ಆಗಬಹುದು.

13. ಮತ್ತೊಂದು ಪ್ರಮುಖವಾಗಿ, ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ತನ್ನ ಕೇಂದ್ರ ಸರಕಾರದ ನೇಮಕಾತಿಗಳಲ್ಲಿ ಒಳ ಮೀಸಲಾತಿಯನ್ನು ಈವರೆಗೂ ಅನುಷ್ಠಾನ ಮಾಡಿಲ್ಲ. ಆ ಬಗ್ಗೆ ಯಾವುದೇ ಸರಕಾರಿ ಆದೇಶವನ್ನು ಹೊರಡಿಸಿಲ್ಲ. ಈ ಬಗ್ಗೆ ರಾಜ್ಯದಲ್ಲಿ, ದೇಶದಲ್ಲಿ ಯಾರೂ ಪ್ರಶ್ನಿಸುತ್ತಿಲ್ಲ. ಕಾರಣ ತಿಳಿಯದು.

14. ಮುಂದುವರಿದು, ಸುಮಾರು 29+ ಸರಕಾರಿ ಕಂಪೆನಿ, ಬೋರ್ಡ್, ಕಾರ್ಪೊರೇಷನ್ಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಖಾಸಗೀಕರಣಗೊಳಿಸಿದೆ. ಇನ್ನು, ಲಾಭದಾಯಕವಾಗಿರುವ ಸರಕಾರಿ ಕಂಪೆನಿ, ಬೋರ್ಡ್, ಕಾರ್ಪೊರೇಷನ್ಗಳಲ್ಲಿ ನೇರ ನೇಮಕಾತಿಗಳ ಬದಲಿಗೆ ಗುತ್ತಿಗೆ ಆಧಾರದ ನೇಮಕಾತಿಗಳನ್ನು ಮಾಡುತ್ತಿದೆ; ಈ ಕಾರಣಗಳಿಂದ ಮೀಸಲಾತಿಯ ಕೋಟ್ಯಂತರ ಉದ್ಯೋಗಗಳು ನಷ್ಟವಾಗಿವೆ. ಈ ಬಗ್ಗೆ ಕಳೆದ 15 ವರ್ಷಗಳಿಂದ ಯಾರೂ ಧ್ವನಿ ಎತ್ತುತ್ತಿಲ್ಲ ಕಾರಣ ತಿಳಿಯದು.

15. ಭಾರತ ಸಂವಿಧಾನದ ಆಶಯಗಳು, ಶೆಡ್ಯೂಲ್ 7ರಲ್ಲಿ ರಾಜ್ಯ ಪಟ್ಟಿಯಲ್ಲಿ ನಿಗದಿಪಡಿಸಿರುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಕರ್ತವ್ಯಗಳು ರಾಜ್ಯ ಸರಕಾರದ್ದಾಗಿದೆ. ಅದರಂತೆ, ಶೋಷಿತ, ಹಿಂದುಳಿದ, ಬಡ ವರ್ಗಗಳ ಕಲ್ಯಾಣವನ್ನು ಮಾಡುವ ಸಲುವಾಗಿ ಮೀಸಲಾತಿ, ಸವಲತ್ತು ಇಂತಹ ಯೋಜನೆ ರೂಪಿಸಿದರೆ, ಸರ್ವೋಚ್ಚ ನ್ಯಾಯಾಲಯ ಪ್ರಾಯೋಗಿಕ ದತ್ತಾಂಶ (Empirical Data) ಸಂಗ್ರಹಿಸಿದ್ದೀರಾ... ಎಂದು ಕೇಳುತ್ತದೆ. ಇತ್ತ ಆ ದತ್ತಾಂಶಗಳನ್ನು ಸಂಗ್ರಹಿಸುವ ಸಲುವಾಗಿ ಸರಕಾರ ದತ್ತಾಂಶ ಒಳಗೊಂಡಂತೆ ಜಾತಿಗಣತಿ ಮಾಡಿದರೆ, ಆರೆಸ್ಸೆಸ್ ಮತ್ತು ಬಿಜೆಪಿಯ ಬ್ರಿಗೇಡಿಯರ್ ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಜಾತಿಗಣತಿಯನ್ನು ವಿರೋಧಿಸಿ ಎಂದು ಸಾರ್ವಜನಿಕರನ್ನು ಪ್ರಚೋದಿಸುತ್ತಾರೆ.

16. ಜಾತಿ ಗಣತಿಯನ್ನೇ ವಿರೋಧಿಸುವ ಎಲ್ಲಾ ಪಕ್ಷಗಳಲ್ಲಿನ ಕೆಲವು ರಾಜಕಾರಣಿಗಳು ಬುದ್ಧಿವಂತಿಕೆಗಾಗಿ, ಜಾತಿಗಣತಿ ಮಾಡಿದ ವಿಧಾನ ಸರಿ ಇಲ್ಲವೆಂದು; ಜಾತಿ ಜಾತಿಗಳ ನಡುವೆ ದ್ವೇಷ ತರುವುದಕ್ಕಾಗಿ ಈ ಜಾತಿಗಣತಿ ಮಾಡಿದ್ದಾರೆ...ಇತ್ಯಾದಿಯಾಗಿ ಧ್ವನಿ ಎತ್ತುತ್ತಿದ್ದಾರೆ.

17. ಪ್ರಮುಖವಾಗಿ, ಶೋಷಿತರಿಗಾಗಿ ಸಂವಿಧಾನದ ಕರ್ತವ್ಯಗಳ ಪಾಲನೆ; ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಂವಿಧಾನ ಆಶಯ ತತ್ವಗಳ ಪಾಲನೆ ಮತ್ತು ನ್ಯಾಯಾಂಗದ ಭಯ ಕಾರಣದಿಂದ ಸರಕಾರಕ್ಕೆ ದತ್ತಾಂಶ ಸಂಗ್ರಹ ಅನಿವಾರ್ಯವಾಗಿದೆ. ಆದರೆ ಈ ಬಗ್ಗೆ ಜಾಗೃತಿ ಇಲ್ಲ.

18. ಈ ದೇಶದ ಸಂಪತ್ತು, ರಾಜಕೀಯ ಶಕ್ತಿ, ಆರ್ಥಿಕ ಶಕ್ತಿ, ಗೌರವಯುತವಾದ ಬದುಕು, ಈ ದೇಶದ ಪ್ರತೀ ನಾಗರಿಕನಿಗೂ ಸಮವಾಗಿ ಈವರೆಗೂ ಹಂಚಿಕೆ ಆಗಲಿಲ್ಲ. ಅಸಮಾನತೆ ಮುಂದುವರಿದಿದೆ.

19. ಶತಶತಮಾನಗಳ ಕಾಲದಿಂದ ಶೋಷಣೆಗೆ ಒಳಗಾದ ಬಡವರಿಗೆ ಮೀಸಲು ಅಥವಾ ಸವಲತ್ತುಗಳಿಗಾಗಿ ಕಾರ್ಯಕ್ರಮ ರೂಪಿಸಿದರೆ, ದತ್ತಾಂಶ ಕೇಳುವ ಸರ್ವೋಚ್ಚ ನ್ಯಾಯಾಲಯ, ಮೋದಿ ಸರಕಾರ ಇಡಬ್ಲ್ಯುಎಸ್ನವರಿಗೆ ಶೇ.10 ಮೀಸಲಾತಿಯನ್ನು ನೀಡಿದಾಗ, ಯಾವುದೇ ದತ್ತಾಂಶ ಕೇಳದೆ, ಆ ಮೀಸಲಾತಿ ಸಂವಿಧಾನಬದ್ಧ ಎಂದು ಎತ್ತಿ ಹಿಡಿಯಿತು.

20. ಇಂತಹ ನೂರಾರು ಗೊಂದಲಗಳು, ನೋವುಗಳು ಇವೆ. ಆದರೆ ಆ ವಿಷಯಗಳ ಬಗ್ಗೆ ಸಾರ್ವಜನಿಕರು, ಸಂಘಟನೆಗಳು, ರಾಜಕಾರಣಿಗಳು, ಮಠಮಾನ್ಯಗಳು ಏತಕ್ಕೆ ಧ್ವನಿ ಎತ್ತುತ್ತಿಲ್ಲ? ಪಕ್ಷಪಾತಿಗಳೇ? ಪ್ರಶ್ನಿಸಲು ಹೇಡಿತನವೇ?

share
ಎಸ್. ಮೂರ್ತಿ
ಎಸ್. ಮೂರ್ತಿ

ರಾಜ್ಯ ಮುಖ್ಯ ಸಂಚಾಲಕರು, ಅಹಿಂದ ಚಳವಳಿ

Next Story
X