ಅಕ್ಕರಂಗಡಿ: ಎಸ್.ಡಿ.ಪಿ.ಐ. ಕಾರ್ಯಕರ್ತರ ಸಭೆ
ಬಂಟ್ವಾಳ, ಎ.20: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಕ್ಕರಂಗಡಿ-ನೆಹರುನಗರ ಬೂತ್ ಮಟ್ಟದ ಕಾರ್ಯಕರ್ತರ ಸಭೆಯು ಅಕ್ಕರಂಗಡಿಯಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ, 'ಬಂಟ್ವಾಳದಲ್ಲಿ ಸಾಮರಸ್ಯದ ಬದುಕು ನಡೆಸುವುದಕ್ಕಾಗಿ ಮತದಾರರು ಈ ಬಾರಿ ಎಸ್.ಡಿ.ಪಿ.ಐ.ಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಬಂಟ್ವಾಳ ಪಿ.ಎಫ್.ಐ. ಅಧ್ಯಕ್ಷ ಇಜಾಝ್ ಅಹ್ಮದ್, ಎಸ್.ಡಿ.ಪಿ.ಐ. ಸ್ಥಳೀಯ ಘಟಕಾಧ್ಯಕ್ಷ ಅಬ್ದುಲ್ ಖಾದರ್, ಸದಸ್ಯರಾದ ಇದ್ರೀಸ್ ಪಿ.ಜೆ. ಮತ್ತಿತರರು ಉಪಸ್ಥಿತರಿದ್ದರು.
Next Story