ಸ್ತುತಿ ಪ್ರಕಾಶನ ಪುಸ್ತಕ ಮಳಿಗೆ ಶುಭಾರಂಭ
ಮಂಗಳೂರು, ಮೇ 27: ಸ್ತುತಿ ಪ್ರಕಾಶನ ಪುಸ್ತಕ ಮಳಿಗೆಯು ಮಂಗಳೂರಿನ ಸಹಕಾರಿ ಸದನದ ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು.
ಹಿರಿಯ ಸಾಹಿತಿ ಮುಹಮ್ಮದ್ ಕುಳಾಯಿ ಮಳಿಗೆಯನ್ನು ಉದ್ಘಾಟಿಸಿದರು.
ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಕೆ.ಎಂ.ಶರೀಫ್, ಸ್ತುತಿ ಪಬ್ಲಿಕೇಷನ್ ಆ್ಯಂಡ್ ಇನ್ಫಾರ್ಮೇಶನ್ ಟ್ರಸ್ಟ್ನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರಸ್ತುತ ಪಾಕ್ಷಿಕ ಸಂಪಾದಕೀಯ ಮಂಡಳಿಯ ಸದಸ್ಯ ಅಬ್ದುರ್ರಝಾಕ್ ಕೆಮ್ಮಾರ ಸ್ವಾಗತಿಸಿದರು. ಸಂಪಾದಕ ಝಿಯಾವುಲ್ ಹಖ್ ವಂದಿಸಿದರು.
Next Story