ಕಲ್ಲಡ್ಕ ಶಾಲೆಯಲ್ಲಿ "ಉಪ್ಪಡ್ ಪಚ್ಚಿಲ್ ಆಯನೊ'' ತುಳುಕೂಟ
ಬಂಟ್ವಾಳ, ಜೂ. 29: ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ``ಉಪ್ಪಡ್ ಪಚ್ಚಿಲ್ ಆಯನೊ'' ಎಂಬ ತುಳುಕೂಟ ಆಯೋಜಿಸಲಾಗಿತ್ತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕರು ರಾಕೋಡಿ ಈಶ್ವರ ಭಟ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಸದಸ್ಯರಾದ ಜಯರಾಂ ರೈ, ಡಾ. ಕಮಲಾ ಪ್ರಭಾಕರ್ ಭಟ್, ಶಾಲಾ ಪೋಷಕರಾದ ಜಯರಾಮ್, ಮಾತೃಭಾರತಿ ಸಮಿತಿಯ ಅಧ್ಯಕ್ಷ ಅರೋಣೋದಯ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಅಧ್ಯಾಪಕರರಾದ ಗಾಯತ್ರಿ ಸ್ವಾಗತಿಸಿ , ಸುಮಿತ್ರಾ ವಂದಿಸಿದರು. ಸುಮಂತ್ ಆಳ್ವ ನಿರೂಪಿಸಿದರು.
Next Story