ಅಶ್ಲೀಲ ವೀಡಿಯೊ ಹಂಚಿಕೆ: ಎಲ್ಲಾ 11 ಆರೋಪಿಗಳಿಗೆ ಜಾಮೀನು
ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಎಲ್ಲಾ ಆರೋಪಿಗಳಿಗೆ ಪುತ್ತೂರು ಪ್ರಥಮ ದರ್ಜೆ ನ್ಯಾಯಿಕ ದಂಢಾಧಿಕಾರಿ ಅವರ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆ ಗೊಳಿಸಿದೆ.
ಸಹಾಯಕ ಸರಕಾರಿ ಅಭಿಯೋಜಕರ ಆಕ್ಷೇಪಣೆ ವಾದ ಹಾಗೂ ಆರೋಪಿ ಪರ ನ್ಯಾಯವಾದಿಗಳ ವಾದ ಮಂಡನೆ ಶನಿವಾರ ನ್ಯಾಯಾಲಯದಲ್ಲಿ ನಡೆಯಿತು.
ಸಹಾಯಕ ಸರಕಾರಿ ಅಭಿಯೋಜಕರ ಆಕ್ಷೇಪಣೆ ದಾಖಲಾಗದ ಕಾರಣ ಜಾಮೀನು ಅರ್ಜಿಯ ವಿಚಾರಣೆ ಶನಿವಾರಕ್ಕೆ ಮುಂದೂಡಲ್ಪಟ್ಟಿತ್ತು. ಆರೋಪಿಗಳಾದ ಚಂದ್ರಶೇಖರ ಮಯ್ಯ, ಮುರಳೀದರ, ಶ್ರೇಯಾಂಸ್, ಪೂವಪ್ಪ ಕೆ, ಪವನ್ ಕುಮಾರ್, ಮೋಹಿತ್, ಧ್ಯಾನ್ ಎ.ಎನ್, ಅಧ್ವಿತ್ ಕುಮಾರ್, ಶೌಕತ್ ಅಲೀ, ಜಾಬಿರ್ ಮತ್ತು ನಝೀರ್ ಜಾಮೀನು ಪಡೆದ ಆರೋಪಿಗಳು.
ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಮಹೇಶ್ ಕಜೆ, ಮಾಧವ ಪೂಜಾರಿ, ಚಿನ್ಮಯ್ ರೈ, ಕೆ.ಎಂ. ಸಿದ್ದೀಕ್, ಇಬ್ರಾಹಿಂ ಬಾತಿಷ, ತೀರ್ಥಪ್ರಸಾದ್, ಶಾಹಿರಾ ಜುಬೇರ್ ವಾದಿಸಿದ್ದರು.