ನ.14ರವರೆಗೆ ಕಾಸರಗೋಡು ಜಿಲ್ಲೆಯಲ್ಲಿ ನಿಷೇದಾಜ್ಞೆ
ಕಾಸರಗೋಡು : ಜಿಲ್ಲೆಯ ಮಂಜೇಶ್ವರ , ಕುಂಬಳೆ , ಕಾಸರಗೋಡು , ವಿದ್ಯಾನಗರ, ಮೇಲ್ಪರಂಬ, ಬೇಕಲ, ನೀಲೇಶ್ವರ, ಚಂದೇರ, ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇರಳ ಪೊಲೀಸ್ ಆಕ್ಟ್ ಸೋಮವಾರ ಬೆಳಗ್ಗಿನಿಂದ ನ.14ರ ರಾತ್ರಿ 12 ಗಂಟೆ ತನಕ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಐದು ಮಂದಿಗಿಂತ ಅಧಿಕ ಗುಂಪು ಸೇರುವುದು, ಸಭೆ, ಮೆರವಣಿಗೆಗೆ ನಿಷೇಧ ಹೇರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story