ಬಾಯಾರು ಸ್ವಲಾತ್ ಗೆ ತೆರಳಿ ಹಿಂತಿರುಗುತ್ತಿದ್ದ ಬಸ್ಸುಗಳ ಮೇಲೆ ಕಲ್ಲು ತೂರಾಟ : ನಾಲ್ಕು ಬಸ್ ಗಳಿಗೆ ಹಾನಿ
ಮಂಜೇಶ್ವರ, ಮೇ 28 : ಬಾಯಾರು ಸ್ವಲಾತ್ ಗೆ ತೆರಳಿ ಹಿಂತಿರುಗುತ್ತಿದ್ದ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದ ಘಟನೆ ಕಳೆದ ರಾತ್ರಿ 1 ಘಂಟೆ ಸುಮಾರಿಗೆ ಸಂಭವಿಸಿದೆ.
ಕಲ್ಲು ತೂರಾಟದಿಂದಾಗಿ ನಾಲ್ಕು ಬಸ್ ಗಳಿಗೆ ಹಾನಿಯಾಗಿವೆ. ಬಾಯಾರು , ಅಟ್ಟಗೋಳಿ, ಕಣ್ಣಾಟಿಪಾರ. ಸೋಂಕಾಲು ಎಂಬೆಡಗಳಲ್ಲಿ ಕಲ್ಲು ತೂರಾಟ ಮಾಡಲಾಗಿದೆ.
ಮಲಪ್ಪುರಂ, ಕಲ್ಲಿಕೋಟೆ ಎಂಬಡೆಗಳಿಂದ ತಲುಪಿದ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಿಂದ ಬಸ್ಸಿನ ಗಾಜುಗಳು ಪುಡಿಯಾಗಿವೆ. ಚುನಾವಣೋತ್ತರ ಘಟನೆಗಳೇ ಕಲ್ಲು ತೂರಾಟಕ್ಕೆ ಕಾರಣವೆನ್ನಲಾಗಿದೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೋಲೀಸರು ತನಿಖೆ ಆರಂಭಿಸಿದ್ದಾರೆ.
Next Story