ಸಂಶಯಾಸ್ಪದ ಡೆಂಗ್ ಪ್ರದೇಶಕ್ಕೆ ದ.ಕ. ಜಿಪಂ ಅಧ್ಯಕ್ಷೆ ಭೇಟಿ
ಜಿಲ್ಲಾ ಕ್ಷಯ ನಿಯಂತ್ರಣ ಅಧಿಕಾರಿ ಡಾ.ಬದುರುದ್ದೀನ್ ನೇತೃತ್ವದ ತಂಡ
ಮಂಗಳೂರು, ಜೂ.7: ಶಾಂತಿಗೋಡು ಪರಿಸರದ ವ್ಯಾಪ್ತಿಯಲ್ಲಿ ಕಲ್ಲುಕೋಟೆ ಮತ್ತು ಪಣಂಬು ಎಂಬಲ್ಲಿ ಸಂಶಯಾಸ್ಪದ ಡೆಂಗ್ ಪ್ರದೇಶಕ್ಕೆ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ತಾಲೂಕು ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಕ್ಷಯ ನಿಯಂತ್ರಣ ಅಧಿಕಾರಿ ಡಾ.ಬದುರುದ್ದೀನ್ ಎಂ.ಎನ್., ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಸರ್ವೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಮಿತಾ ಹಾಗೂ ಕ್ಷಯ ವಿಭಾಗ ಆರೋಗ್ಯಾಧಿಕಾರಿ ಕಚೇರಿ ಹಿರಿಯ ಆರೋಗ್ಯ ಸಹಾಯಕ ವೆಂಕಟೇಶ್ ಹುದ್ದಾರ್ ಸಹಿತ ಮತ್ತಿತರರನ್ನು ಒಳಗೊಂಡ ತಂಡ ಭೇಟಿ ನೀಡಿತು.
ಡೆಂಗ್ ಕಾಯಿಲೆಯ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದರ ಜೊತೆಗೆ ಲಾರ್ವಾ ಪ್ರಾತ್ಯಕ್ಷಿಕೆ ಡೆಂಗ್ ಬಾಧಿತ ಮನೆಗಳ ಸದಸ್ಯರಿಗೆ ತೋರಿಸಿ ಅರಿವು ಮೂಡಿಸಲಾಯಿತು.
Next Story