ಜು.6ರಂದು ಬಜ್ಪೆ ಬಸ್ ನಿಲ್ದಾಣದ ಕಾಮಗಾರಿ ಉದ್ಘಾಟನೆ
ಮಂಗಳೂರು, ಜು.4: ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಬಜ್ಪೆ ಗ್ರಾಪಂನ ಸಹಯೋಗದಲ್ಲಿ ಬಜ್ಪೆ ಬಸ್ ನಿಲ್ದಾಣದ ಕಾಂಕ್ರಿಟ್ ಆವರಣ ನಿರ್ಮಾಣ ಕಾಮಗಾರಿಯನ್ನು ಜು. 6ರಂದು ಬೆಳಗ್ಗೆ 10 ಗಂಟೆಗೆ ಬಜ್ಪೆ ಗ್ರಾಪಂ ಕಚೇರಿ ಬಳಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಾಸಕ ಉಮಾನಾಥ್ ಕೋಟ್ಯಾನ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story