ಚಿನ್ನದ ಕೆಲಸಗಾರ ಆತ್ಮಹತ್ಯೆ
ಮೂಡುಬಿದಿರೆ : ಬೆಳುವಾಯಿ ಗ್ರಾಮದ ನಡ್ಯೋಡಿ ನಿವಾಸಿ, ಚಿನ್ನದ ಕೆಲಸಗಾರ ಉಮೇಶ್ ಆಚಾರ್ಯ (59) ಮನೆ ಸಮೀಪ ಮರಕ್ಕೆ ನೇಣು ಬಿಗಿದು ಆತ್ಯಹತ್ಯೆಗೈದಿದ್ದಾರೆ.
ಮಂಗಳೂರಿನಲ್ಲಿ ಚಿನ್ನದ ಕೆಲಸ ವೃತ್ತಿಯನ್ನು ಮಾಡುತ್ತಿದ್ದು ಬಾಡಿಗೆ ಮನೆಯಲ್ಲಿದ್ದರು. ಅವರು ಕೊರೋನದಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಮಂಗಳವಾರ ರಾತ್ರಿ ಬೆಳುವಾಯಿಯ ತನ್ನ ಮನೆಗೆ ಸಮೀಪದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಬುಧವಾರ ಬೆಳಗ್ಗೆ ಮನೆಯವರಿಗೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ ಎಂದು ದೂರಲಾಗಿದೆ.
ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
Next Story