ಅಗಲಿದ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಕಸಾಪದಿಂದ ನುಡಿನಮನ
ಮಂಗಳೂರು, ಸೆ. 26: ಅಗಲಿದ ಗಾನಯೋಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿನಮನ-ಗಾನನಮನ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಕಸಾಪ ದ.ಕ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತುಳು ರಂಗಭೂಮಿಯ ಖ್ಯಾತ ಕಲಾವಿದ ಹಾಗೂ ಚಿತ್ರನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪ್ರಮುಖರಾದ ವಿ.ಜಿ.ಪಾಲ್, ಜಿ.ಕೆ.ಭಟ್ ಸೆರಾಜೆ, ವಸಂತ ಕದ್ರಿಘಿ, ನಾಗರಾಜು ಬಸ್ರೂರು, ಮುರಳೀಧರ ಕಾಮತ್, ರವೀಂದ್ರ ಎಸ್ ಪ್ರಭು, ರಜನಿ ಶೆಣೈ ಅಭಿಜಿತ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.