ಬಜ್ಪೆ : ಹತ್ರಸ್ ಪ್ರಕರಣ, ಪಿಎಫ್ಐ ವಿರುದ್ಧದ ಆರೋಪ ಖಂಡಿಸಿ ಪ್ರತಿಭಟನೆ
ಬಜ್ಪೆ : ಹತ್ರಸ್ ಪ್ರಕರಣ ಹಾಗೂ ಪಾಪ್ಯುಲರ್ ಫ್ರಂಟ್ ವಿರುದ್ಧ ಯುಪಿ ಸರ್ಕಾರ ನಡೆಸುತ್ತಿರುವ ನಿರಾಧಾರ ಆರೋಪವನ್ನು ಖಂಡಿಸಿ ಹಾಗು ಸಿಎಫ್ಐ ಮುಖಂಡರುಗಳ ವಿರುದ್ಧ ದಾಖಲಾಗಿರು ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿ ಬಜ್ಪೆ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ತುಪೈಲ್ ಅತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯನ್ನುದ್ದೇಶಿಸಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಪಿಎಫ್ಐ ಮಂಗಳೂರು ಗ್ರಾಮಾಂತರ ಜಲ್ಲಾಧ್ಯಕ್ಷ ಮೊಯ್ದಿನ್ ಹಳೆಯಂಗಡಿ ವಹಿಸಿದ್ದರು. ಪ್ರತಿಭಟನೆಯಲ್ಲಿ ಪಿಎಫ್ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಾವೂರು, ಪಿಎಫ್ಐ ಬಜ್ಪೆ ಡಿವಿಷನ್ ಅಧ್ಯಕ್ಷ ಹಸೈನಾರ್, ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪಿಎಫ್ಐ ಜಿಲ್ಲಾ ನಾಯಕ ಮಜೀದ್ ಜೋಕಟ್ಟೆ ಉಪಸ್ಥಿತರಿದ್ದರು.
ಸಮೀರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story