ಹತ್ರಸ್ ಘಟನೆ ಖಂಡಿಸಿ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಮೌನ ಪ್ರತಿಭಟನೆ
ಮಂಗಳೂರು, ಅ.10: ಉತ್ತರ ಪ್ರದೇಶದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಶನಿವಾರ ನಗರದ ಕ್ಲಾಕ್ ಟವರ್ ಬಳಿ ಮೌನ ಪ್ರತಿಭಟನೆ ನಡೆಯಿತು.
ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ಧರಣಿಯ ನೇತೃತ್ವ ವಹಿಸಿದ್ದರು.
ಈ ಸಂದರ್ಭ ಸಿದ್ದೀಕ್ ತಲಪಾಡಿ, ಸಿಎಂ ಮುಸ್ತಫಾ, ಸಾಲಿ ಬಜ್ಪೆ, ಎಂ. ಹನೀಫ್, ಹಿದಾಯತ್ ಮಾರಿಪಳ್ಳ, ಸಮೀರ್, ಶರೀಫ್ ದೇರಳಕಟ್ಟೆ, ಮುನವ್ವರ್, ವಿಎಚ್ ಕರೀಂ, ಬಶೀರ್, ಇಕ್ಬಾಲ್ ಎಫ್ಎಸ್, ಇಬ್ರಾಹೀಂ, ಫಾರೂಕ್ ಸೋಶಿಯಲ್, ಶಬೀರ್ ತಲಪಾಡಿ, ಅಬ್ದುಲ್ ಜಲೀಲ್ (ಅದ್ದು), ಮೊಯ್ದಿನ್ ಮೋನು, ರಹೀಂ ಬಂಟ್ವಾಳ್, ಅಬೂಬಕರ್, ಇಚ್ಚು ಕಂದಕ್ ಪಾಲ್ಗೊಂಡಿದ್ದರು.