ಕ್ರಿಕೆಟ್ ಬೆಟ್ಟಿಂಗ್: ಏಳು ಮಂದಿ ಬಂಧನ
ಕುಂದಾಪುರ, ಅ.10: ಕೋಟೇಶ್ವರ ಜೂನಿಯರ್ ಕಾಲೇಜು ಬಳಿ ಅ.9ರಂದು ರಾತ್ರಿ ವೇಳೆ ಐಪಿಎಲ್ ಕ್ರಿಕೆಟ್ ಪಂದ್ಯಾಟದ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಏಳು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕೋಟೇಶ್ವರದ ರಾಘವೇಂದ್ರ(38), ಸರ್ಫರಾಝ್ (35), ರತೀಶ್ (35), ಅರಸರಬೆಟ್ಟುವಿನ ಶ್ರುತಿರಾಜ್ (28), ಸುಭಾಸ್ (29), ಹಳವಳ್ಳಿಯ ಮುರಳಿ (30), ಬೀಜಾಡಿಯ ರಾಘವೇಂದ್ರ(37) ಬಂಧಿತ ಆರೋಪಿಗಳು.
ಇವರು ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ಹಣವನ್ನು ಪಣವಾಗಿಟ್ಟು ಬೆಟ್ಟಿಂಗ್ ನಡೆಸುತ್ತಿದ್ದರೆನ್ನ ಲಾಗಿದೆ. ಬಂಧಿತರಿಂದ 29,000 ರೂ. ನಗದು, ಒಂದು ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಫುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story