ಉಪ್ಪಿನಂಗಡಿ: ಆಡು ಕಳವು ಪ್ರಕರಣ; ಮೂವರು ಸೆರೆ
ಉಪ್ಪಿನಂಗಡಿ: ಆಡು ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಅವರಿಂದ ಆಡುಗಳನ್ನು ವಶಕ್ಕೆ ಪಡೆದಿದ್ದಾರೆ.
34 ನೆಕ್ಕಿಲಾಡಿಯ ಆದರ್ಶನಗರದ ಸಿನಾನ್ (19), ಇಳಂತಿಲ ಗ್ರಾಮದ ಅಂಬೊಟ್ಟುವಿನ ರಿಯಾಝ್ (21), 34 ನೆಕ್ಕಿಲಾಡಿಯ ನಿಝಾಮುದ್ದೀನ್ (18) ಬಂಧಿತ ಆರೋಪಿಗಳು.
ಅ. 13 ರಂದು ಸಂಜೆ ಇಳಂತಿಲ ಗ್ರಾಮದ ಕಡವಿನ ಗುಡ್ಡೆ ಎಂಬಲ್ಲಿ ಮೇಯಲು ಬಿಟ್ಟ ಎರಡು ಆಡುಗಳನ್ನು ಹಾಗೂ ಅವುಗಳ ಮರಿಗಳನ್ನು ಕಳವು ಮಾಡಿರುವ ಬಗ್ಗೆ ಉಮ್ಮರ್ ಫಾರೂಕ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಹೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಅ.15 ರಂದು ಉಪ್ಪಿನಂಗಡಿ - ಗುರುವಾಯನಕೆರೆ ರಸ್ತೆಯ ಕುಪ್ಪೆಟ್ಟಿ ಎಂಬಲ್ಲಿ ಕಾರು ಸಹಿತ ಆಡುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಕಳವು ನಡೆಸಿದ ವಿಚಾರ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story